ಡಿವಿಜಿ ಸುದ್ದಿ, ಬೆಂಗಳೂರು: ಹಣ ಸಿಕ್ಕರೆ ಸಾಕು ನನಗೂ ಬೇಕು, ನಮ್ಮ ಮನೆಯವರಿಗೂ ಬೇಕು ಎನ್ನುವ ಈ ಕಾಲದಲ್ಲಿ, ಆಟೋದಲ್ಲಿ ಬಿಟ್ಟು ಹೋಗಿದ್ದ 1.5 ಲಕ್ಷ ಹಣವನ್ನು ಪ್ರಯಾಣಿಕರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದಾನೆ ಬೆಂಗಳೂರಿನ ಆಟೋ ಚಾಲಕ.

ಹೌದು, ಮಾಲ್ಡೀವ್ಸ್ ದೇಶದ ಪ್ರಜೆಯೊಬ್ಬರು ಆಟೊದಲ್ಲಿ 1.5 ಲಕ್ಷ ಹಣವನ್ನು ಬಿಟ್ಟು ಹೋಗಿದ್ದರು. ಚಾಲಕ ರಮೇಶ್ಬಾಬು ನಾಯಕ್ ಪೊಲೀಸರ ಮೂಲಕ ವಿದೇಶಿ ಪ್ರಜೆ ಪತ್ತೆ ಮಾಡಿ ಅವರ ಹಣವನ್ನು ಅವರಿಗೆ ಮರಳಿಸಿದ್ದಾನೆ. ಹೃದಯ ಶಸ್ತ್ರಚಿಕಿತ್ಸೆಗೆಂದು ನಗರಕ್ಕೆ ಬಂದಿದ್ದ ವಿದೇಶಿ ಪ್ರಜೆ, ಶೇಷಾದ್ರಿಪುರದ ಲಾಡ್ಜ್ನಲ್ಲಿ ಉಳಿದುಕೊಂಡಿದ್ದರು. ಚಾಲಕನ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಟ್ವೀಟ್ ಮಾಡಿ ಧನ್ಯವಾದ ಹೇಳಿದ್ದಾರೆ.
Excellent job by Auto driver Rameshbabu Nayak , who promptly retuned back the cash bag left in Auto of Indian citizen Dr M R Baskar , residing in Maldives, he was felicitated by @sspuramps Police staff & Maldives citizen Amount of Rs 1,50,000 Indian currency & 12000 US dollars. pic.twitter.com/bh2qLfQWxZ
— CP Bengaluru ಪೊಲೀಸ್ ಆಯುಕ್ತ ಬೆಂಗಳೂರು (@CPBlr) December 12, 2019
ನಾರಾಯಣ ಹೃದಯಾಲಯದಿಂದ ತಪಾಸಣೆ ಮುಗಿಸಿಕೊಂಡು ರಮೇಶ್ಬಾಬು ಅವರ ಆಟೋದಲ್ಲಿ ಶೇಷಾದ್ರಿಪುರ ಲಾಡ್ಜ್ ಬಳಿ ಬಂದಿದ್ದರು. ಹಣವಿದ್ದ ಬ್ಯಾಗ್ ಆಟೊದಲ್ಲಿ ಬಿಟ್ಟು ಇಳಿದು ಹೋಗಿದ್ದರು. ಸ್ಥಳದಿಂದ ಹೊರಟು ಹೋಗಿದ್ದ ರಮೇಶ್ಬಾಬು ಅವರಿಗೆ ಕೆಲ ಗಂಟೆಗಳ ಬಳಿಕ ಆಟೋದಲ್ಲಿದ್ದ ಹಣದ ಬ್ಯಾಗ್ ಕಂಡಿದೆ. ಅದನ್ನು ತೆಗೆದುಕೊಂಡು ಶೇಷಾದ್ರಿಪುರ ಠಾಣೆಗೆ ಬಂದಿದ್ದಾರೆ. ಇದೇ ಸಂದರ್ಭದಲ್ಲಿ ವಿದೇಶಿ ಪ್ರಜೆ ಠಾಣೆಗೆ ದೂರು ನೀಡಲು ಬಂದಿದ್ದರು.
ಆಗ ರಮೇಶ್ಬಾಬು ಅವರಿಂದ ಹಣ ಪಡೆದುಕೊಂಡು ವಿದೇಶಿ ಪ್ರಜೆಗೆ ಹಸ್ತಾಂತರಿಸಲಾಗಿದೆ. ಪ್ರಾಮಾಣಿಕತೆ ಮೆರೆದ ರಮೇಶ್ಬಾಬು ಅವರನ್ನು ಸನ್ಮಾನಿಸಿದ್ರು. ಹೃದಯ ಶಸ್ತ್ರಚಿಕಿತ್ಸೆ ಮಾಡಿಸಲು ಬೆಂಗಳೂರಿಗೆ ಬಂದಿದ್ದೆ. ಹಣ ಕಳೆದಾಗ ಜೀವವೇ ಹೊಂದಂತಾಗಿತ್ತು. ಹಣ ವಾಪಸ್ ನೀಡಿದ್ದಕ್ಕೆ ರಮೇಶ್ಬಾಬು ಅವರಿಗೆ ಕೃತಜ್ಞತೆ ಎಂದು ಹಣ ಕಳೆದುಕೊಂಡ ವಿದೇಶಿ ಪ್ರಜೆ ಭಾಸ್ಕರ್.



