ದಾವಣಗೆರೆ: ಮನೆಯಲ್ಲಿ ಬಟ್ಟೆ ಒಣಗಿಸುವ ತಂತಿಗೆ ವಿದ್ಯುತ್ ಗ್ರೌಂಡ್ ಆಗಿ ದಂಪತಿ ಸಾವನ್ನಪ್ಪಿರುವ ಘಟನೆ ದಾವಣಗೆರೆ ತಾಲೂಕಿನ ಬಾವಿಯಾಳು ಗ್ರಾಮದಲ್ಲಿ ನಡೆದಿದೆ.
ಬಾವಿಯಾಳು ಗ್ರಾಮದಲ ರವಿಶಂಕರ್ (40) ಹಾಗೂ ವೀಣಾ (28) ಮೃತಪಟ್ಟಿದ್ದಾರೆ. ಪತಿ ರವಿಶಂಕರ್ ಗೆ ಮೊದಲು ಕರೆಂಟ್ ಶಾಕ್ ಹೊಡೆದಿದೆ. ರವಿಶಂಕರ್ ಅವರನ್ನು ಉಳಿಸಲು ಹೋದ ಪತ್ನಿ ವೀಣಾ ಕೂಡ ವಿದ್ಯುತ್ ಶಾಕ್ ನಿಂದ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಮಾಯಕೊಂಡ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.



