ಹರಪನಹಳ್ಳಿ: ತಾಲ್ಲೂಕಿನ ತೆಲಗಿ ಹೋಬಳಿ ವ್ಯಾಪ್ತಿಯ ಕಂಡಿಕೇರಿ ಗ್ರಾಮದಲ್ಲಿ ಚಿರತೆ ಪತ್ತೆಯಾಗಿದ್ದು, ಕುರಿಗಾಹಿ ಮೇಲೆ ದಾಳಿ ಮಾಡಿದೆ. ಕುರಿಗಾಯಿ ಕೊಡಲಿಯಿಂದ ಹೊಡೆದು ಪ್ರಾಣ ಅಪಾಯದಿಂದ ಪಾರದ ಘಟನೆ ನಡೆದಿದೆ.
ಚಿರತೆಯ ಚಲನವಲನ ಮೊಬೈಲ್ನಲ್ಲಿ ಚಿತ್ರಿಕರಿಸಿ ಕುರಿಗಾಹಿ ಕರಿಬಸಪ್ಪ ಸಾಹಸ ಮೆರೆದಿದ್ದಾನೆ. ತೆಲಗಿ ಗ್ರಾಮದ ಕರಿಬಸಪ್ಪ ಎಂಬ ಯುವಕ (21) ಗ್ರಾಮದ ಜಮೀನುಗಳಿಗೆ ಹೊಂದಿಕೊಂಡಿರುವ ಕಂಡಿಕೇರಿ ಅರಣ್ಯ ಪ್ರದೇಶದಲ್ಲಿ ಎಂದಿನಂತೆ ಕುರಿಗಳನ್ನು ಮೇಯಿಸಲು ತೆರಳಿದ್ದಾರೆ. ಏಕಾ ಏಕಿ ಚಿರತೆ ಅವರ ಮೇಲೆ ಎರಗಿದೆ. ಹೆದರದೇ ಕೈಯಲ್ಲಿದ್ದ ಕೂಡಲಿಯಿಂದ ಪ್ರತಿ ದಾಳಿ ಮಾಡಿದ ಯುವಕ ಚಿರತೆಯನ್ನು ಹಿಮ್ಮೆಟ್ಟಿಸುವಲ್ಲಿ ಸಫಲನಾಗಿದ್ದಾನೆ.
ದಾಳಿ ಮಾಡಿದರೂ ಬೆನ್ನು ಬಿಡದೆ ಚಿರತೆ ಚಲನವಲನವನು ಯುವಕ ಮೊಬೈಲ್ನಲ್ಲಿ ಚಿತ್ರಿಕರಿಸಿದ್ದಾನೆ. ಚಿರತೆಗಳ ಬಗ್ಗೆ ಅರಣ್ಯ ಇಲಾಖೆ ಕೂಡಲೇ ಸೂಕ್ತ ಕ್ರಮ ಜರುಗಿಸಬೇಕು. ಮಾನವರ ಮೇಲೆ ದಾಳಿ ಮಾಡುತ್ತಿರುವುದು ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.



