Connect with us

Dvgsuddi Kannada | online news portal | Kannada news online

ಭರಮಸಾಗರ ಬಳಿ ಭೀಕರ ಅಪಘಾತ: ಬೆಂಗಳೂರಿನಿಂದ ದಾವಣಗೆರೆ ಬರುತ್ತಿದ್ದ ನಿವೃತ್ತ ಡಿವೈಎಸ್ ಪಿ, ಅವರ ಪತ್ನಿ ಸ್ಥಳದಲ್ಲಿಯೇ ಸಾವು

ದಾವಣಗೆರೆ

ಭರಮಸಾಗರ ಬಳಿ ಭೀಕರ ಅಪಘಾತ: ಬೆಂಗಳೂರಿನಿಂದ ದಾವಣಗೆರೆ ಬರುತ್ತಿದ್ದ ನಿವೃತ್ತ ಡಿವೈಎಸ್ ಪಿ, ಅವರ ಪತ್ನಿ ಸ್ಥಳದಲ್ಲಿಯೇ ಸಾವು

ದಾವಣಗೆರೆ: ಭರಮಸಾಗರ ಬಳಿ ಕಾರು ಮತ್ತು ಟ್ರಕ್ ನಡುವೆ ಭೀಕರ ಅಪಘಾತ‌ ಸಂಭವಿಸಿದ್ದು, ಬೆಂಗಳೂರಿನಿಂದ ದಾವಣಗೆರೆಗೆ ಕಾರಿನಲ್ಲಿ ಬರುತ್ತಿದ್ದ ಅಬಕಾರಿ ಇಲಾಖೆ ನಿವೃತ್ತ ಡಿವೈಎಸ್ ಪಿ ಜಯರಾಂ ‌ನಾಯ್ಕ್ (73) ಹಾಗೂ ಅವರ ಪತ್ನಿ ಲತಾ‌(63) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಬೆಂಗಳೂರಿನಿಂದ ದಾವಣಗೆರೆ ಬರುವಾಗ ಹಿಂಬದಿಯಿಂದ ಟ್ರಕ್ ಗೆ ಕಾರು ಡಿಕ್ಕಿಯಾಗಿದೆ. ಈ ಕಾರು ದಾವಣಗೆರೆ ನೋಂದಣಿ ನಂಬರ್ ( ಕೆಎ 17 ಎಂ 8037) ಹೊಂದಿದೆ. ಇಂದು ಮಧ್ಯಾಹ್ನ 2.30ಕ್ಕೆ ಈ ಘಟನೆ ನಡೆದಿದೆ. ಭರಮಸಾಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ‌‌ನಡೆದಿದ್ದು, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top