ದಾವಣಗೆರೆ: 66/11 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರ ದಾವಣಗೆರೆಯಿಂದ ಹೊರಡುವ ಜಿ.ಅಂಡ್ಎಸ್, ಜಯನಗರ ಮತ್ತು ಡಿಸಿಎಮ್ ಫೀಡರ್ಗಳಲ್ಲಿ 24*7 ಜಲಸಿರಿ ಯೋಜನೆಯಡಿಯಲ್ಲಿ ನಿರಂತರ ಶುದ್ದಕುಡಿಯುವ ನೀರಿನ ಸರಬರಾಜು ಯೋಜನೆ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಇಂದು (ಜು.18) ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಜಿಅಂಡ್ಎಸ್ ಎಫ್7 ಫೀಡರ್ ವ್ಯಾಪ್ತಿಯ ಪಿ.ಬಿ. ರಸ್ತೆ. ಬಿಲಾಲ್ಕಾಂಪೊಂಡ್, ಟ್ರಾಫೀಕ್ ಪೋಲಿಸ್ ಠಾಣೆ, ತಾಲ್ಲೂಕ್ಆಫೀಸ್, ಫೈರ್ ಆಫೀಸ್, ಎಪಿಎಂಸಿ, ದಿಬ್ಬಳ್ಳಿ ಕಾಂಪೊಂಡ್, ಭಗತ್ಸಿಂಗ್ ನಗರ, ಗಣೇಶ ಲೇಔಟ್,ಗೀತಾಂಜಲಿ ಟ್ಯಾಕೀಸ್, ಈರುಳ್ಳಿ ಮಾರ್ಕಟ್,ಕೆಎಸ್ಆರ್ ಟಿಸಿ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳು”. ಜಯನಗರ ಎಫ್14 ಫೀಡರ್ ವ್ಯಾಪ್ತಿಯ ನಿಟುವಳ್ಳಿ ಹಾಗು ನಿಟುವಳ್ಳಿ ಹೊಸಬಡಾವಣೆ, ದುರ್ಗಾಂಬಿಕದೇವಸ್ಥಾನ ಸುತ್ತಮುತ್ತ, 60 ಅಡಿರಸ್ತೆ, ಭಗಿರತ ಸರ್ಕಲ್,ಜಯನಗರ ಎ,ಬಿ.ಸಿ ಬ್ಲಾಕ್, ಜಯನಗರಚರ್ಚ ಮತ್ತು ಸುತ್ತ ಮುತ್ತಲಿನ ಪ್ರದೇಶಗಳು”.
ಡಿಸಿಎಮ್ಎಫ್-06 ಫೀಡರ್ ವ್ಯಾಪ್ತಿಯ ಶಕ್ತಿನಗರ, ಬನಶಂಕರಿದೇವಸ್ಥಾನದ ಸುತ್ತಮುತ್ತ, ರಾಜೇಂದ್ರಬಡಾವಣೆ, ಡಿ.ಸಿ.ಎಂ ಟೌನ್ಶಿಪ್, ನಿಟುವಳ್ಳಿ-ಶ್ರೀರಾಮ್ ಬಡಾವಣೆ, ಎಸ್.ಎಸ್ ಹೈಟೆಕ್ ಲೇಔಟ್,ಕೊಟ್ರೇಶ್ವರ ಬಡಾವಣೆ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.



