Connect with us

Dvgsuddi Kannada | online news portal | Kannada news online

ದಾವಣಗೆರೆ: ವಿಶ್ವಕರ್ಮ ಸಮಾವೇಶಕ್ಕೆ ಬಂದಿದ್ದ ಯುವತಿ ಆಟೋದಲ್ಲಿ ಬಿಟ್ಟು ಹೋದ ಬ್ಯಾಗ್, ಲ್ಯಾಪ್ ಟಾಪ್; ಪತ್ತೆಹಚ್ಚಿ ವಾಪಸ್ ಕೊಡಿಸಿದ ಜಿಲ್ಲಾ ಪೊಲೀಸ್

IMG 20220712 WA0000

ದಾವಣಗೆರೆ

ದಾವಣಗೆರೆ: ವಿಶ್ವಕರ್ಮ ಸಮಾವೇಶಕ್ಕೆ ಬಂದಿದ್ದ ಯುವತಿ ಆಟೋದಲ್ಲಿ ಬಿಟ್ಟು ಹೋದ ಬ್ಯಾಗ್, ಲ್ಯಾಪ್ ಟಾಪ್; ಪತ್ತೆಹಚ್ಚಿ ವಾಪಸ್ ಕೊಡಿಸಿದ ಜಿಲ್ಲಾ ಪೊಲೀಸ್

ದಾವಣಗೆರೆ: ನಗರದಲ್ಲಿ ಆಯೋಹಿಸಿದ್ದ ವಿಶ್ವಕರ್ಮ ಜನ ಜಾಗೃತಿ ಸಮಾವೇಶದಲ್ಲಿ ಭಾಗವಹಿಸಲು ಬಂದಿದ್ದ ಯುವತಿ ಆಟೋದಲ್ಲಿ ಬಿಟ್ಟು ಹೋದ ಲ್ಯಾಪ್ ಟಾಪ್, ಮೊಬೈಲ್ ಹಾಗೂ ಬಟ್ಟೆ ಇದ್ದ ಬ್ಯಾಗ್ ಅನ್ನು ಜಿಲ್ಲಾ ಪೊಲೀಸರು ಹಾಗೂ ಸ್ಮಾರ್ಟ್ ಸಿಟಿ ಕಮಾಂಡೋ ಸೆಂಟರ್ ಸಿಬ್ಬಂದಿ ಸಿಸಿ ಕ್ಯಾಮರಾ ಮೂಲಕ ಆಟೋ ಪತ್ತೆ ಮಾಡಿ ಬ್ಯಾಗ್ ವಾಪಸ್ ಕೊಡಿಸಿದ್ದಾರೆ.

ಗದಗ ಜಿಲ್ಲೆಯ ಗಾಯತ್ರಿ ಬಿ ಪತ್ತಾರ್ ಅವರು ಬಾಪೂಜಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ವಿಶ್ವಕರ್ಮ ಜನಜಾಗೃತಿ ಸಮಾವೇಶದಲ್ಲಿ ಭಾಗವಹಿಸಲು ದಾವಣಗೆರೆಗೆ ಬಂದಿದ್ದರು. ರೈಲ್ವೆ ನಿಲ್ದಾಣದಿಂದ ಬಾಪೂಜಿ ಸಮುದಾಯ ಭವನಕ್ಕೆ ಆಟೋ ಮೂಲಕ ಹೋಗುವಾಗ ಆಟೋದಲ್ಲಿಯೇ ಲ್ಯಾಪ್ ಟಾಪ್ , ಮೊಬೈಲ್ ಹಾಗೂ ಬಟ್ಟೆ ಹೊಂದಿದ್ದ ಬ್ಯಾಗ್ ಬಿಟ್ಟು ಹೋಗಿದ್ದರು.

ಕೂಡಲೇ ಅವರು ಅಲ್ಲಿಯೇ ಇದ್ದ ಪೊಲೀಸ್ ಸಿಬ್ಬಂದಿ ಗಮನಕ್ಕೆ ತಂದಿದ್ದಾರೆ. ಪೊಲೀಸ್ ಸಿಬ್ಬಂದಿ ದಾವಣಗೆರೆ ಸಾರ್ಟ್ ಸಿಟಿ ಕಮಾಂಡೋ ಸೆಂಟರ್ ಸಿಬ್ಬಂದಿ ಮೂಲಕ ಸಿಸಿ ಟಿವಿ ದೃಶ್ಯಾವಳಿ ಪರಿಶೀಲಿಸಿ‌ ಬ್ಯಾಗ್ ಪತ್ತೆ ಮಾಡಿದ್ದಾರೆ. ಆಟೋದಲ್ಲಿ ಸಿಕ್ಕ‌ ಬ್ಯಾಗ್ ಅನ್ನು ಡಿವೈಎಸ್ ಪಿ ನರಸಿಂಹ ತಾಮ್ರಧ್ವಜ, ವೃತ್ತ ನಿರೀಕ್ಷಕ ಅನಿಲ್ ಅವರು ಗಾಯತ್ರಿ ಬಿ ಪತ್ತಾರ್ ಅವರಿಗೆ ಹಿಂತಿರುಗಿಸಿದ್ದಾರೆ.

 

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

ದಾವಣಗೆರೆ

Advertisement
Advertisement Enter ad code here

Title

To Top