ಡಿವಿಜಿಸುದ್ದಿ, ದಾವಣಗೆರೆ: ನಗರದ ಎಸ್.ಜೆ.ಎಂ ನಗರದಲ್ಲಿ ಸರ್ಕಾರಿ ಪ್ರಾಥಮಿಕ ಪಾಠ ಶಾಲೆ ಹಾಗೂ ಶ್ರೀ ದುರ್ಗಾದೇವಿ ಪ್ರಾಥಮಿಕ ಪಾಠ ಶಾಲೆಯಲ್ಲಿ ಡಾ.ಬಿ.ಅರ್.ಅಂಬೇಡ್ಕರ್ ರವರ 65ನೇಯ ವರ್ಷದ ಪರಿನಿರ್ವಾಣ ದಿನಾಚರಣೆ ಆಚರಿಸಲಾಯಿತು.
ಇದೇ ಸಂದರ್ಭದಲ್ಲಿ ಪಶ್ವನಾಥ್ ಮೂರ್ತಿ ಪೂಜಾ ಸಂಘ, ಮೈತ್ರಿ ಸನ್ನಧ್ನ ಜೈನ್ ಸಮುದಾಯ ಗ್ರೂಪ್ನ ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗೆ ಉಚಿತವಾಗಿ ಅಗತ್ಯವಿರುವ ಪಠ್ಯ ಪುಸ್ತಕಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಸಂಗೀತ ಎನ್, ನರೇಂದ್ರ ಜೈನ್, ಸಂಗೀತ.ಎಲ್, ಪ್ರಮೀಳಾ ವಿ.ಜೈನ್, ರೀಂಕು.ಎಸ್.ಜೈನ್, ಪೂಜಾ ಆರ್. ಜೈನ್, ಯುವ ಕಾಂಗ್ರೆಸ್ ಸಮಿತಿ ಜಿಲ್ಲಾ ಉಪಾಧ್ಯಕ್ಷ ಸಾಗರ್ ಎಲ್. ಹೆಚ್ ಉಪಸ್ಥಿತರಿದ್ದರು.




