ದಾವಣಗೆರೆ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೆಲ ಕಟ್ಟಡಗಳ ಮಾಲೀಕರು ಮಳೆ ನೀರನ್ನು ಯುಜಿಡಿ ಪೈಪ್ಲೈನ್ಗೆ ಸಂಪರ್ಕ ಮಾಡಿದ್ದಾರೆ.15 ದಿನಗಳ ಒಳಗಾಗಿ ಕಟ್ಟಡದ ಮಾಲೀಕರು ಮಳೆ ನೀರನ್ನು ಯುಜಿಡಿ ಸಂಪರ್ಕ ಕೊಟ್ಟಿರುವುದನ್ನು ತೆರವುಗೊಳಿಸಿ ಮಳೆ ನೀರು ಚರಂಡಿಗೆ ಬಿಡುವ ವ್ಯವಸ್ಥೆ ಮಾಡಬೇಕು ಎಚ್ಚರಿಕೆ ನೀಡಲಾಗಿದೆ.
ಯುಜಿಡಿಗೆ ಸಂಬಂಧಿಸಿದಂತೆ ಬಹಳಷ್ಟು ದೂರುಗಳು ಮಹಾನಗರಪಾಲಿಕೆಯಲ್ಲಿ ಸ್ವೀಕೃತವಾಗುತ್ತಿದ್ದು, ಕೆಲವೊಂದು ಕಡೆ ಮನೆಗಳಿಗೆ ಯುಜಿಡಿಗೆ ನೀರು ನುಗ್ಗಿರುವ ಬಗ್ಗೆ ವರದಿಯಾಗಿದೆ. ಹೀಗಾಗಿ 15 ದಿನಗಳ ಒಳಗಾಗಿ ತೆರವು ಮಾಡದೇ ಇದ್ದಲ್ಲಿ ಮಹಾನಗರಪಾಲಿಕೆ ವತಿಯಿಂದಲೇ ತೆರವುಗೊಳಿಸಿ ಅದಕ್ಕೆ ತಗಲುವ ವೆಚ್ಚವನ್ನು ಸಂಬಂಧಿಸಿದ ಕಟ್ಟಡದ ಮನೆ ಕಂದಾಯಕ್ಕೆ ಸೇರಿಸಿ ವಸೂಲಿ ಮಾಡಲಾಗುವುದು ಎಂದು ಮಹಾನಗರಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



