ನವದೆಹಲಿ: ಬರೋಬ್ಬರಿ 30 ವರ್ಷದ ನಂತ್ರ ಸಿಖ್ ಹತ್ಯಾಕಾಂಡ ನೆನೆದ ಮಾಜಿ ಪ್ರಧಾನಿ ಮನ್ ಮೋಹನ್ ಸಿಂಗ್,1984ರಲ್ಲಿ ಗೃಹ ಸಚಿವರಾಗಿದ್ದ ಪಿ.ವಿ ನರಸಿಂಹ ರಾವ್ ಅವರು ಮಾಜಿ ಪ್ರಧಾನಿ ಐ.ಕೆ. ಗುಜ್ರಾಲ್ ಅವರ ಮಾತು ಕೇಳಿದ್ದಿದ್ದರೆ ಸಿಖ್ ಹತ್ಯಾಕಾಂಡ ತಪ್ಪಿಸಬಹುದಿತ್ತು ಅಂತಾ ಹೇಳಿದ್ದಾರೆ.
ದಿವಂಗತ ಗುಜ್ರಾಲ್ ಅವರ 100ನೇ ಜನ್ಮದಿನಾಚರಣೆ ಗುರುವಾರ ಆಚರಣೆ ಸಂದರ್ಭದಲ್ಲಿ ಗುಜ್ರಾಲ್ ನೆನಪು ಮಾಡಿಕೊಂಡರು.
ಇಂದಿರಾ ಗಾಂಧಿ ಹತ್ಯೆ ನಂತರ ಗುಜ್ರಾಲ್ ತುಂಬಾ ಬೇಸರದಲ್ಲಿದ್ದರು. ಅವರು ಗೃಹ ಸಚಿವ ಪಿ.ವಿ ನರಸಿಂಹ ರಾವ್ ಬಳಿ ಹೋಗಿ ದೇಶದ ಪರಿಸ್ಥಿತಿ ಗಂಭೀರವಾಗಿದೆ. ಹಾಗಾಗಿ ಆದಷ್ಟು ಬೇಗ ಸೇನೆಯನ್ನು ಕರೆಯಿರಿ ಎಂದ್ರು. ಆಗ ರಾವ್ ಅವರು ಗುಜ್ರಾಲ್ ಮಾತು ಕೇಳಿದ್ದರೆ, 1984ರ ಸಿಖ್ ಹತ್ಯಾಕಾಂಡ ತಪ್ಪಿಸಬಹುದಾಗಿತ್ತು ಎಂದು ಮನಮೋಹನ್ ಸಿಂಗ್ ಹೇಳಿದ್ರು.
ತಮ್ಮ ಮತ್ತು ಗುಜ್ರಾಲ್ ಸ್ನೇಹವನ್ನುಗೆಳೆತನ ನೆನೆದ ಸಿಂಗ್, ನಾವಿಬ್ಬರು ಪಾಕಿಸ್ತಾನದ ನಿರಾಶ್ರಿತರಾಗಿ ಭಾರತಕ್ಕೆ ಬಂದು ಪ್ರಧಾನಿ ಸ್ಥಾನಕ್ಕೇರಿದವರು. ನಾನು ಮತ್ತು ಗುಜ್ರಾಲ್ ಪಾಕಿಸ್ತಾನದ ಜೀಲಂ ಜಿಲ್ಲೆಯವರು. ಪ್ರಧಾನಿಯಾಗುವವರೆಗೆ ನಾವಿಬ್ಬರೂ ಜೊತೆಗೆ ಪಯಾಣಿಸಿದ್ದೇವು ಎಂದ್ರು ಸ್ಮರಿಸಿದರು.
ಈ ಕಾರ್ಯಕ್ರಮದಲ್ಲಿ ಎನ್ ಸಿಪಿ ನಾಯಕ ಶರದ್ ಪವಾರ್, ರೈಲ್ವೆ ಸಚಿವ ಪೀಯುಷ್ ಗೋಯಲ್, ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈ ಶಂಕರ್, ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಎಡಪಕ್ಷದ ಮುಖಂಡ ಸೀತಾರಾಂ ಭಾಗಿಯಾಗಿದ್ರು.



