ದಾವಣಗೆರೆ: ಜಗಳೂರು ತಾಲ್ಲೂಕಿನ ಗೋಪಗೊಂಡನಹಳ್ಳಿ ಗ್ರಾಮದ ಹೊರ ವಲಯದಲ್ಲಿರುವ ಶ್ರೀ ಚೌಡಮ್ಮ ಮಾತಂಗಮ್ಮ ದೇವಸ್ಥಾನದ ಒಳಗಡೆ ಸುಮಾರು 5 ದಿನದ ನವಜಾತ ಹೆಣ್ಣು ಶಿಶುವನ್ನು ಬಿಟ್ಟು ಹೋಗಿದ್ದರಿಂದ ಮಗುವನ್ನು ಗ್ರಾಮಸ್ಥರು ರಕ್ಷಣೆ ಮಾಡಿರುವ ಮಾಹಿತಿ ಆರೋಗ್ಯ ಇಲಾಖೆಗೆ ತಲುಪಿದ ಕೂಡಲೆ ಶಿಶುವನ್ನು ರಕ್ಷಿಸಲಾಗಿದ್ದು ಶಿಶುವಿನ ಆರೋಗ್ಯ ಪ್ರಸ್ತುತ ಉತ್ತಮವಾಗಿದೆ ಎಂದು ವೈದ್ಯರು ತಿಳಿಸಿರುತ್ತಾರೆ.
ಶಿಶುವಿನ ಜೈವಿಕ ಪೋಷಕರು ಶಿಶುವನ್ನು ಪಡೆಯಲು ಶಿಶುವಿನ ಜನನಕ್ಕೆ ಸಂಬಂಧಿಸಿದ ಸೂಕ್ತವಾದ ದಾಖಲಾತಿಗಳೊಂದಿಗೆ ಪ್ರಕಟಣೆಗೊಂಡ 60 ದಿನಗಳ ಒಳಗಾಗಿ ಸಂಪರ್ಕಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಚೇರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಜೆ.ಹೆಚ್ ಪಟೇಲ್ ಬಡಾವಣೆ ಶಾಮನೂರು. ದೂ.ಸಂ-9591430013/8722358929 ಅಥವಾ ಸರ್ಕಾರಿ ವಿಶೇಷ ದತ್ತು ಸಂಸ್ಥೆ (ಅಮೂಲ್ಯ)(ಜಿ) ಲೋಕಿಕೆರೆ ರಸ್ತೆ, ಶ್ರೀರಾಮನಗರ, ದೂ.ಸಂ-7829215214 ದಾವಣಗೆರೆ ಇಲ್ಲಿಗೆ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಪ್ರಕಟಣೆಯಲ್ಲಿ ತಿಳಿಸಿದೆ.



