Connect with us

Dvgsuddi Kannada | online news portal | Kannada news online

ದಾವಣಗೆರೆ: ಅರಣ್ಯ ಇಲಾಖೆ ವತಿಯಿಂದ ಜೂ.05ರಿಂದ 12ರವರೆಗೆ ಬೀಜ ಬಿತ್ತನೆ ಅಭಿಯಾನ

World Environment Day

ದಾವಣಗೆರೆ

ದಾವಣಗೆರೆ: ಅರಣ್ಯ ಇಲಾಖೆ ವತಿಯಿಂದ ಜೂ.05ರಿಂದ 12ರವರೆಗೆ ಬೀಜ ಬಿತ್ತನೆ ಅಭಿಯಾನ

ದಾವಣಗೆರೆ: 2022-23ನೇ ಸಾಲಿಗೆ ಅರಣ್ಯ ಇಲಾಖಾ ವತಿಯಿಂದ ಹಸಿರು ಕರ್ನಾಟಕ ಕಾರ್ಯಕ್ರಮದ ಭಾಗವಾಗಿ ದಾವಣಗೆರೆ ವಿಭಾಗದ ಎಲ್ಲಾ ಪ್ರಾದೇಶಿಕ ವಲಯಗಳಲ್ಲಿ ಜೂ.05 ರಿಂದ ಜೂ.12 ರವರೆಗೆ ಬೀಜ ಬಿತ್ತನೆ ಅಭಿಯಾನ-2022-23 ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವನ್ನು  ಅಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಶಾಲಾ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಶಾಲಾ/ಕಾಲೇಜು ಮಕ್ಕಳೊಂದಿಗೆ ಸ್ಕೌಟ್ಸ್ ಅಂಡ್ ಗೈಡ್ಸ್ ಎನ್.ಸಿ.ಸಿ ಮತ್ತು ಎನ್.ಎಸ್.ಎಸ್ ವಿದ್ಯಾರ್ಥಿಗಳ ಸಹಭಾಗಿತ್ವದೊಂದಿಗೆ ಹಮ್ಮಿಕೊಳ್ಳಲಾಗಿದೆ.

ಬೀಜ ಬಿತ್ತನೆ ಅಭಿಯಾನವನ್ನು ದಾವಣಗೆರೆ ಪ್ರಾದೇಶಿಕ ವಿಭಾಗದ ವಲಯಗಳಾದ ದಾವಣಗೆರೆ ವಲಯದಲ್ಲಿ 05 ಪ್ರದೇಶಗಳಲ್ಲಿ, ಜಗಳೂರು ವಲಯದಲ್ಲಿ 04 ಅರಣ್ಯ ಪ್ರದೇಶಗಳಲ್ಲಿ, ಹರಪನಹಳ್ಳಿ ವಲಯದಲ್ಲಿ 06, ಹೊನ್ನಾಳಿ ವಲಯದಲ್ಲಿ 08 ಹಾಗೂ ರಂಗಯ್ಯನದುರ್ಗ ವನ್ಯಜೀವಿ ವಲಯದಲ್ಲಿ 01 ವಿವಿಧ ಸ್ಥಳೀಯ ಜಾತಿಯ ಉತ್ತಮ ಗುಣಮಟ್ಟದ 2900 ಕೆ.ಜಿ ಯಷ್ಟು ಬೀಜ ಬಿತ್ತನೆ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

ದಾವಣಗೆರೆ

Advertisement
Advertisement Enter ad code here

Title

To Top