ಡಿವಿಜಿ ಸುದ್ದಿ, ದಾವಣಗೆರೆ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಹದ ಮಾಡ್ತೀವಿ ಅಂತಾ ಹೇಳಿಕೆ ಕೊಟ್ಟ ಶಾಸಕ ರೇವಣ್ಣ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ, ಈ ದೇಶ, ರಾಜ್ಯ ನಿಮ್ಮಪ್ಪನ ಆಸ್ತಿಯ ಎಂದು ಕಿಡಿಕಾರಿದರು.
ದಾವಣಗೆರೆಯಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ದೇಶ, ರಾಜ್ಯಗಳು ಸಾರ್ವಜನಿಕರ ಆಸ್ತಿ. ಇಲ್ಲಿ ನಿಮ್ಮ ಗೂಂಡಾಗಿರಿ, ವಾಮ ಮಾರ್ಗದಿಂದ ಅಧಿಕಾರ ನಡೆಸೋಕೆ ಆಗಲ್ಲ. ನಿಂಬೆಹಣ್ಣು, ವಾಮ ಮಾರ್ಗದಿಂದ ಅಧಿಕಾರ ಉಳಿಸಿಕೊಳ್ಳಲು ಮುಂದಾದ ರೇವಣ್ಣರಿಗೆ ತಾಕತ್ತಿದ್ದರೆ ಅಖಾಡಕ್ಕೆ ಬರಲಿ. ಯಡಿಯೂರಪ್ಪ ಬಗ್ಗೆ ಹುಚ್ಚು ಹೇಳಿಕೆ ಕೊಡುವ ರೇವಣ್ಣರಿಗೆ ಜನರೇ ಪಾಠ ಕಲಿಸಲಿದ್ದಾರ ಆಕ್ರೋಶ ವ್ಯಕ್ತಪಡಿಸಿದರು.
ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. ಮೂರು ಬಾರಿ ಶಾಸಕನಾಗಿದ್ದೇನೆ. ಎರಡು ಸಲ ನಿಗಮ ಮಂಡಳಿ ಅಧ್ಯಕ್ಷನಾಗಿ ಮಂತ್ರಿ ಕೂಡ ಆಗಿದ್ದೇನೆ.ಇಷ್ಟರಲ್ಲಿಯೇ ತೃಪ್ತಿ ಇದೆ. ಅವಕಾಶವಾದಿ ರಾಜಕಾರಣ ಮಾಡಲ್ಲ. ರಾಜ್ಯದಲ್ಲಿ ಯಾರು ಅವಕಾಶವಾದಿ ರಾಜಕಾರಣ ಮಾಡ್ತಾರೆ ಎಂಬುದು ಚುನಾವಣೆ ಫಲಿತಾಂಶದ ಬಳಿಕ ಗೊತ್ತಾಗಲಿದೆ ಎಂದರು.



