ದಾವಣಗೆರೆ: ಹೆರಿಗೆ ಆಸ್ಪತ್ರೆಯಲ್ಲಿ ಕಳ್ಳತನವಾಗಿದ್ದ ಮಗು ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಪತ್ತೆ..!

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
1 Min Read

ದಾವಣಗೆರೆ: ಕಳೆದ 20 ದಿನದಿಂದ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ನಾಪತ್ತೆಯಾಗಿದ್ದ ಮಗು ಪತ್ತೆಯಾಗಿದೆ. ನಗರದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ  ಮಗು ಸಿಕಗಕಿದೆ.

ನಗರ ಕೆ.ಆರ್‌. ಮಾರುಕಟ್ಟೆ ಹತ್ತಿರದ ಮಹಿಳಾ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆಯಿಂದ ಮಾ. 16 ರಂದು ಹೆರಿಗೆಯಾದ ಮಗು ಕಳುವಾಗಿತ್ತು. ಆ ಮಗು ಕೊನೆಗೂ ಪತ್ತೆಯಾಗಿದ್ದು, ಅಪರಿಚಿತ ಮಹಿಳೆಯೊಬ್ಬರು  ಹೈಸ್ಕೂಲ್‌ ಮೈದಾನದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಪತ್ತೆಯಾಗಿದೆ. ಅಪರಿಚಿತ ಮಹಿಳೆಯೊಬ್ಬರು  ಅಜ್ಜಿ ಕೈಯಲ್ಲಿ ಮಗು ನೀಡಿ ಟಾಯ್ಲೆಟ್ ರೂಮ್ ಗೆ ಹೋಗಿ ಬರ್ತೇನೆ  ಎಂದು ಹೇಳಿ ಪರಾರಿಯಾಗಿದ್ದಾರೆ.

ಹರಪನಹಳ್ಳಿ ಗುಂಡಿನಕೆರೆಯ ಇಸ್ಮಾಯಿಲ್‌ ಜಬೀವುಲ್ಲಾ-ಉಮೇಸಲ್ಮಾ ದಂಪತಿಗೆ ಮಾ. 16 ರಂದು ಸಂಜೆ  ಶಸ್ತ್ರಚಿಕಿತ್ಸೆ ಮೂಲಕ ಗಂಡು ಮಗು ಹೆರಿಗೆಯಾಗಿತ್ತು.  ಐಸಿಯುನಲ್ಲಿ ಇಟ್ಟಿದ್ದ ಮಗುವನ್ನು ಅಪರಿಚಿತ ಮಹಿಳೆಯೊಬ್ಬರ ಒಯ್ದಿದ್ದರು. ಈ ಬಗ್ಗ ಸಿಸಿಟಿವಿ ಯಲ್ಲಿ  ಕೆಂಪು ಚೂಡಿದಾರ, ಬಿಳಿ ಹಿಜಾಬ್‌ ಧರಿಸಿದ ಮಹಿಳೆ ಮಗುವನ್ನು ನರ್ಸ್‌ ಕೈಯಿಂದ ತಗೊಂಡು ಹೋಗುತ್ತಿರುವ ದೃಶ್ಯ ಸೆರೆಯಾಗಿತ್ತು.ಮಗುವಿನ ಪತ್ತೆಗಾಗಿ ವಿವಿಧ ಸಂಘನೆ ನಡೆಸಿದ್ದರು.

ಮಗುವಿನ ಸುಳಿವು ನೀಡಿದವರಿಗೆ 25 ಸಾವಿರ ನೀಡುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್‌ ಘೋಷಣೆ ಮಾಡಿದ್ದರು. ಆದರೂ ಮಗು ಪತ್ತೆಯಾಗಿರಲಿಲ್ಲ.ಆಜಾದ್‌ನಗರದ ಮಹಿಳೆಯೊಬ್ಬರು ಸಿಸಿಟಿವಿ ಕ್ಯಾಮೆರಾದಲ್ಲಿ ಕಂಡ ಮಹಿಳೆಯನ್ನು ಹೋಲುತ್ತಿರುವುದು ಎರಡು ದಿನಗಳ ಹಿಂದೆ ಪತ್ತೆಯಾಗಿತ್ತು. ಮಂಗಳವಾರ ಬೆಳಿಗ್ಗೆ ಮಹಿಳೆಯನ್ನು ದಾವಣಗೆರೆ ರೈಲ್ವೆ ಸ್ಟೇಷನ್‌ ಬಳಿ ಪತ್ತೆ ಹಚ್ಚಿ ಮಹಿಳಾ ಪೊಲೀಸ್  ವಿಚಾರಣೆ ಆರಂಭಿಸಿದ್ದರು. ಈವೇಳೆ ಮಂಗಳವಾರ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ಮಗುವನ್ನು ಎತ್ತಿಕೊಂಡು ಬಂದಿದ್ದು, ಅಲ್ಲೇ ಪಕ್ಕದ ಅಂಗಡಿ ಬಳಿ ಕುಳಿತಿದ್ದ ಅಜ್ಜಿ ಕೈಗೆ ನೀಡಿ,  ಟಾಯ್ಲೆಟ್ ರೂಮ್ ಗೆ  ಹೋಗಿ ಬರ್ತೇನೆ ಪರಾರಿಯಾಗಿದ್ದರು. ಇದೀಗ ಪೊಲೀಸರು ಮಗುವನ್ನು ವಶಕ್ಕೆ ಪಡೆದು  ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ.

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *