ಡಿವಿಜಿ ಸುದ್ದಿ, ದಾವಣಗೆರೆ: ಉಪ ಚುನಾವಣೆ ನಡೆಯಲಿರುವ 15 ಕ್ಷೇತ್ರದಳಲ್ಲಿಯೂ ಬಿಜೆಪಿ ಅಲೆ ಇದ್ದು, 15 ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಮಪತ್ರ ಸಲ್ಲಿಕೆಯಾದ ಬಳಿಕ 15 ಕ್ಷೇತ್ರಗಳಲ್ಲಿ ಬಿಜೆಪಿ ಅಲೆ ಇದೆ. ನನಗೆ ರಾಣೆಬೆನ್ನೂರು ಹಾಗೂ ಹಿರೇಕೆರೂರ ಕ್ಷೇತ್ರದ ಉಸ್ತುವಾರಿ ವಹಿಸಿದ್ದು, ಈ ಎರಡು ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದರು.
ಮಾಜಿ ಉಪ ಮುಖ್ಯಮಂತ್ರಿ ಡಾ. ಪರಮೇಶ್ವರ ಅವರು ಜೆಡಿಎಸ್ ಪಕ್ಷವನ್ನ ಕೋತಿಗೆ ಹೊಲಿಕೆ ಮಾಡಿದ್ದಾರೆ. ಇದಕ್ಕೆ ಜೆಡಿಎಸ್ ನವರು ಉತ್ತರ ಕೊಡಬೇಕು. ಜೆಡಿಎಸ್ ಉತ್ತರ ಕೊಡದಿದ್ದರೇ ಪರಮೇಶ್ವರ ಹೇಳಿಕೆ ಸತ್ಯ ಹೇಳಿದ್ದಾರೆ ಎಂದುಅ ಅರ್ಥ ಆಗುತ್ತದೆ. ಜೆಡಿಎಸ್ ನ ಮಾಜಿ ಸಚಿವ ಜಿ.ಟಿ. ದೇವೇಗೌಡ ಅವರು ಮೊದಲು ಬಿಜೆಪಿ ಯಲ್ಲಿ ಇದ್ದವರು. ಜೊತೆಗೆ ಹಿರಿಯ ರಾಜಕಾರಣಿ. ಸದ್ಯಕ್ಕೆ ಅವರು ತಟಸ್ಥರಾಗಿದ್ದಾರೆ. ಈ. ಬಗ್ಗೆ ಯಾವುದೇ ಹೇಳಿಕೆ ನೀಡಲ್ಲ ಎಂದು ತಿಳಿಸಿದರು.



