Connect with us

Dvgsuddi Kannada | online news portal | Kannada news online

ಸ್ನೇಹಿತರ ಜತೆ ಸೇರಿದ ಡಿಸಿಸಿ ಬ್ಯಾಂಕ್  ಕ್ಲರ್ಕ್ ಬರೋಬ್ಬರಿ 4.20 ಕೋಟಿ  ನಗದು, 3ಕೆಜಿ ಚಿನ್ನ ಲೂಟಿ..!    

ಪ್ರಮುಖ ಸುದ್ದಿ

ಸ್ನೇಹಿತರ ಜತೆ ಸೇರಿದ ಡಿಸಿಸಿ ಬ್ಯಾಂಕ್  ಕ್ಲರ್ಕ್ ಬರೋಬ್ಬರಿ 4.20 ಕೋಟಿ  ನಗದು, 3ಕೆಜಿ ಚಿನ್ನ ಲೂಟಿ..!    

ಬೆಳಗಾವಿ: ಜಿಲ್ಲೆಯ ಮುರಗೋಡ ಡಿಸಿಸಿ ಬ್ಯಾಂಕ್ ಅತಿ ದೊಡ್ಡ ದರೋಡೆ  ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.  ಬಂಧಿತರಿಂದ ಬರೋಬ್ಬರಿ 4.20 ಕೋಟಿ ನಗದು ಹಾಗೂ 3 ಕೆಜಿ ಚಿನ್ನ ಜಪ್ತಿ ಮಾಡಿದ್ದಾರೆ.

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುರಗೋಡ ಡಿಸಿಸಿ ಬ್ಯಾಂಕ್ ನಲ್ಲಿ ಕಳೆದ ಮಾರ್ಚ್ 6ರಂದು ದರೋಡೆ ನಡೆದಿತ್ತುಈ ಪ್ರಕರಣ ಮೂರು ಆರೋಪಿಗಳನ್ನು ಬಂಧಿದಿಸ 4.20 ಕೋಟಿ ನಗದು, 3 ಕೆಜೆ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ. ಈ  ಅತಿ ದೊಡ್ಡ ದರೋಡೆ ಮಾಡಿದ್ದು ಬೇರೆ ಯಾರು ಅಲ್ಲ, ಅದೇ ಡಿಸಿಸಿ ಬ್ಯಾಂಕ್ ನಲ್ಲಿ ಕ್ಲರ್ಕ್ ಆಗಿದ್ದ ಬಸವರಾಜ ಹುಣಶೀಕಟ್ಟಿ ತನ್ನ ಸ್ನೇಹಿತರಾದ  ಯರಗಟ್ಟಿ ಗ್ರಾಮದ ಸಂತೋಷ್ ಕಾಳಪ್ಪ ಕಂಬಾರ ಹಾಗೂ ಸವದತ್ತಿಯ ಗಿರೀಶ್ ಲಕ್ಷ್ಮಣ ಜತೆ ಸೇರಿ ದರೋಡೆ ಮಾಡಿದ್ದಾನೆ.

ಬ್ಯಾಂಕ್ ಸಿಬ್ಬಂದಿಗಳೆ ಮೇಲೆ ಅನುಮಾನದೊಂದಿಗೆ ತನಿಖೆಗೆ ಇಳಿದ  ಜಿಲ್ಲಾ ಪೊಲೀಸರಿಗೆ, ಬ್ಯಾಂಕ್ ಕ್ಲರ್ಕ್ ಬಸವರಾಜ ಹುಣಶೀಕಟ್ಟಿ ಮೇಲೆ ಅನುಮಾನ ಬಂದಿದೆ. ಆತನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದಾಗ ಬಾಯ್ಬಿಟ್ಟಿದ್ದಾನೆ. ದರೋಡೆ ಮಾಡಿದ ಹಣ, ಬಂಗಾರವನ್ನು ಜಮೀನಿನಲ್ಲಿ ಮುಚ್ಚಿಟ್ಟಿದ್ದರು  ಎಂದು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ ಮಾಹಿತಿ ನೀಡಿದ್ದಾರೆ.

 

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top