Connect with us

Dvgsuddi Kannada | online news portal | Kannada news online

ದಾವಣಗೆರೆ; ಕಸ ಸುಡಲು ಹಚ್ಚಿದ ಬೆಂಕಿಗೆ ಫಸಲಿಗೆ ಬಂದ 600 ಅಡಿಕೆ ಮರ ಭಸ್ಮ.!

n35632353090cbbe385dbf2b0fece43853e3154213b8f996cb0085335d5b5903bcb49cb289

ದಾವಣಗೆರೆ

ದಾವಣಗೆರೆ; ಕಸ ಸುಡಲು ಹಚ್ಚಿದ ಬೆಂಕಿಗೆ ಫಸಲಿಗೆ ಬಂದ 600 ಅಡಿಕೆ ಮರ ಭಸ್ಮ.!

ದಾವಣಗೆರೆ: ಪಕ್ಕದ ಜಮೀನು ಮಾಲೀಕ ಕಸ ಸುಡಲು ಹಚ್ಚಿದ ಬೆಂಕಿಗೆ ಸುಮಾರು 600 ಅಡಕೆ ಮರಗಳು ಸುಟ್ಟು ಭಸ್ಮವಾಗಿವೆ. ಈ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಹೀರೇಕೊಗಲೂರು ಗ್ರಾಮದಲ್ಲಿ ನಡೆದಿದೆ.

ಎರಡು ಎಕರೆ ಪ್ರದೇಶದಲ್ಲಿದ್ದ ಬೆಳೆದಿದ್ದ ನಾಲ್ಕು ವರ್ಷದ ಫಸಲಿಗೆ ಬಂದಿದ ಅಡಕೆ ಮರಗಳು ಬೆಂಕಿಗೆ ಬಲಿಯಾಗಿವೆ. ಹೀರೇಕೊಗಲೂರ ಗ್ರಾಮದ ರುದ್ರಪ್ಪ ಎಂಬ ರೈತ ಎರಡು ಎಕರೆಯಲ್ಲಿ ಅಡಕೆ ಹಾಕಿದ್ದರು. ಅಕಾಸ್ಮಿಕವಾಗಿ ಬೆಂಕಿ ತಗುಲಿ ಇದೀಗ ಅಡಿಕೆ ಗಿಡಗಳು ನಾಶವಾಗಿವೆ.

ಪಕ್ಕದ ಜಮೀನು ಮಾಲೀಕ ಕೊಟ್ರಪ್ಪ ಕಸ ಸುಡುವುದಕ್ಕಾಗಿ ಬೆಂಕಿ ಹಚ್ಚಿದ್ದಾರೆ. ಇದೇ ಬೆಂಕಿ ವ್ಯಾಪಕವಾಗಿ ಹರಡಿ ಅಡಕೆ ತೋಟಕ್ಕೂ ಹೊತ್ತಿಕೊಂಡಿದೆ. ನಾಲ್ಕು ವರ್ಷಗಳಿಂದ ಕಷ್ಟಪಟ್ಟು ಬೆಳೆಸಿದ ಅಡಕೆ ಮರ ಭಸ್ಮವಾಗಿದೆ. ಕಷ್ಟಪಟ್ಟು ಬೆಳೆಸಿದ ರೈತ ಕುಟುಂಬ ಕಣ್ಣೀರು ಹಾಕುತ್ತಿದೆ. ಅಗ್ನಿ ಶಾಮಕ ದಳದ ಸಿಬ್ಬಂದಿ ಬರುವಷ್ಟರಲ್ಲಿ ಅಡಕೆ ಮರಗಳು ಸುಟ್ಟು ಕರಕಲಾಗಿವೆ. ಈ ಬಗ್ಗೆ ಸಂತೆಬೆನ್ನೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

ದಾವಣಗೆರೆ

Advertisement
Advertisement Enter ad code here

Title

To Top