ದಾವಣಗೆರೆ: ಹುಡುಗಿ ವಿಚಾರವಾಗಿ ಅಣ್ಣನೇ ತಮ್ಮನ ಕತ್ತು ಸೀಳಿ ಹತ್ಯೆ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
1 Min Read

ದಾವಣಗೆರೆ: ನಗರದ ಹೊರ ವಲಯದ ಕುಂದವಾಡ ಕೆರೆ ಬಳಿ  ಶವವಾಗಿ  ಪತ್ತೆಯಾಗಿದ್ದ ಪ್ರಕರಣದ ಆರೋಪಿಯನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಹುಡುಗಿ ವಿಚಾರವಾಗಿ ಅಣ್ಣನೇ ತಮ್ಮನ ಕತ್ತು ಸೀಳಿ ಹತ್ಯೆ  ಮಾಡಿದ್ದು, ಕೊಲೆ ಮಾಡಿದ ಅಣ್ಣ ಇದೀಗ ಜೈಲು ಕಂಬಿ ಎಣಿಸುವಂತಾಗಿದೆ.

ಜಿಲ್ಲೆಯ ಹರಿಹರದ ವಿದ್ಯಾನಗರ ನಿವಾಸಿ ಮೆಹೆಬೂಬ್ ಬಾಷಾ ಅವರ ಮಗ ಅಲ್ತಾಫ್, ಇದೇ ತಿಂಗಳು 19ರಂದು ಕುಂದವಾಡ ಕೆರೆ ಬಳಿಯ  ನಿರ್ಜನ ಪ್ರದೇಶದಲ್ಲಿ ಶವ ಪತ್ತೆಯಾಗಿದ್ದನು. ಈಗ ಸ್ವತಃ ಅಣ್ಣನೇ ತಮ್ಮನ ಕೊಲೆ‌ ಮಾಡಿದ್ದಾನೆ ಎಂದು ಪೊಲೀಸ್ ತನಿಖೆಯಿಂದ  ಗೊತ್ತಾಗಿದೆ. ಅಣ್ಣನಿಗೆ ಮದುವೆ ನಿಶ್ಚಯ ಆಗಿದ್ದರಿಂದ ಅಣ್ಣ-ತಮ್ಮ ಇಬ್ಬರು ಶಾಪಿಂಗ್​ಗೆ ತೆರಳಿದ್ದರು. ಆ ದಿನ ಮಗ ಮನೆಗೆ ಬರದಿದ್ದರಿಂದ ಅಲ್ತಾಫ್ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ನಂತರ ಕುಂದುವಾಡ ಬಳಿ ಅಲ್ತಾಫ್  ಶವ ಸಿಕ್ಕಿತ್ತು.  ಅಣ್ಣ ಇಬ್ರಾಹಿಂ ಹುಡುಗಿ ವಿಚಾರವಾಗಿ ಅಲ್ತಾಫ್​ ಕತ್ತು ಸೀಳಿ ಹತ್ಯೆ ಮಾಡಿದ್ದನು.

ಅಕ್ಕ- ತಂಗಿ ಮಕ್ಕಳಾದ ಇಬ್ಬರ ನಡುವೆ ಹುಡುಗಿಗಾಗಿ ವೈಮನಸ್ಸು ಉಂಟಾಗಿತ್ತು. ಅಣ್ಣನಿಗೆ ಮದುವೆ ನಿಶ್ಚಯವಾಗಿದ್ದ ಹುಡುಗಿ ಮೇಲೆ ತಮ್ಮ ಕಣ್ಣು ಹಾಕಿದ್ದನು. ಈ  ವಿಚಾರ ತಿಳಿಯುತ್ತಿದ್ದಂತೆ ಶಾಪಿಂಗ್ ಗೆ ಕರೆ ತಂದು  ಕೊಲೆ ಮಾಡಿದ್ದನು. ಆರೋಪಿ ಇಬ್ರಾಹಿಂಗೆ ಮಾರ್ಚ್‌ ತಿಂಗಳಲ್ಲಿ ಮದುವೆ ನಿಶ್ಚಯವಾಗಿತ್ತು. ನಿಶ್ಚಿತಾರ್ಥ ಸಮಾರಂಭಕ್ಕೆಂದು ಇಬ್ರಾಹಿಂ ಹಾಗೂ ಅಲ್ತಾಫ್‌ ಬಟ್ಟೆ  ಖರೀದಿಗೆ ಬಂದಾಗ ಘಟನೆ ನಡೆದಿದೆ.

 

 

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *