ಬೆಂಗಳೂರು: ಅನಾರೋಗ್ಯದಿಂದ ಮನನೊಂದು ಬಿಇಒ ಅಧಿಕಾರಿ ಡಬಲ್ ಬ್ಯಾರೆಲ್ ಗನ್ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.
ಯಲಹಂಕ ಬಿಇಒ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕಮಲಾಕರ್ ಆತ್ಮಹತ್ಯೆಗೆ ಶರಣಾಗಿದ್ದಾರೆ.ಅವರಿಗೆ 52 ವರ್ಷ ವಯಸ್ಸಾಗಿತ್ತು. ಶಿವಮೊಗ್ಗದ ತೀರ್ಥಹಳ್ಳಿ ಮೂಲದವರಾಗಿದ್ದ ಕಮಲಾಕರ್ ಮಾಂಸಖಂಡಗಳ ನೋವಿನಿಂದ 2 ವರ್ಷಗಳಿಂದ ಬಳಲುತ್ತಿದ್ದರು. ಶಿಕ್ಷಣಾಧಿಕಾರಿಯಾಗಿ ಉತ್ತಮ ಹೆಸರು ಸಂಪಾದಿಸಿದ್ದರು.ಯಲಹಂಕ ಕೋಡಿಗೆಹಳ್ಳಿಯ ಎನ್ ಟಿಐ ಲೇಔಟ್ ಈ ಘಟನೆ ನಡೆದಿದ್ದು, ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



