ದಾವಣಗೆರೆ: ಮೂರು ವರ್ಷದ ಎರಡುವರೆ ಸಾವಿರ ಅಡಿಕೆ ಮತ್ತು ಪಪ್ಪಾಯಿ ಸಸಿಗಳನ್ನು ರಾತ್ರೋರಾತ್ರಿ ದುಷ್ಕರ್ಮಿಗಳು ಕಡಿದು ಹಾಕಿರುವ ಘಟನೆ ತಾಲ್ಲೂಕಿನ ಬೋರಗೊಂಡನಹಳ್ಳಿಯಲ್ಲಿ ನಡೆದಿದೆ.
ದಾವಣಗೆರೆ ತರಕಾರಿ ಅಂಗಡಿ ಮಾಲೀಕರಾದ ಎಸ್.ಎಂ.ತಿಪ್ಪೇಸ್ವಾಮಿ ಅವರು ತಾಲ್ಲೂಕಿನ ಬೋರಗೊಂಡನಹಳ್ಳಿಯ ಸಮೀಪದ ಮೂರು ಎಕರೆ ಜಮೀನಿನಲ್ಲಿ ಅಡಿಕೆ ಜತೆ ಮಿಶ್ರ ಬೆಳೆಯಾಗಿ ಪಪ್ಪಾಯಿ ಬೆಳೆದಿದ್ದರು. ಅಡಿಕೆ ಸಸಿ ಕೂಡ ಉತ್ತಮವಾಗಿ ಬೆಳೆದಿದ್ದವು.ಆದರೆ, ರಾತ್ರೋರಾತ್ರಿ ಜಮೀನಿಗೆ ನನುಗ್ಗಿದ ದುಷ್ಕರ್ಮಿಗಳು ಕಳೆದ ರಾತ್ರಿ ಮೂರು ವರ್ಷ ತುಂಬಿದ್ದ ಎರಡೂವರೆ ಸಾವಿರ ಅಡಿಕೆ ಗಿಡಗಳನ್ನು ಸಂಪೂರ್ಣವಾಗಿ ಕಡೆದು ಹಾಕಿದ್ದಾರೆ.
ಈ ಕೃತ್ಯ ನಡೆಸಿದವರು ಯಾರು ಎಂಬುದು ತಿಳಿದು ಬಂದಿಲ್ಲ. ಘಟನೆಯ ಹಿನ್ನೆಲೆಯಲ್ಲಿ ದಾವಣಗೆರೆ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ಧಾರೆ.



