Connect with us

Dvgsuddi Kannada | online news portal | Kannada news online

ಮೈಸೂರಲ್ಲಿ ಡಬಲ್ ಮರ್ಡರ್: ಮಗನೇ ತಂದೆಯನ್ನು ಕೊಂದು ಪರಾರಿ..!

mysur murder

ಕ್ರೈಂ ಸುದ್ದಿ

ಮೈಸೂರಲ್ಲಿ ಡಬಲ್ ಮರ್ಡರ್: ಮಗನೇ ತಂದೆಯನ್ನು ಕೊಂದು ಪರಾರಿ..!

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಲ್ಲಿ ನಡೆದ ಡಬಲ್ ಮರ್ಡರ್, ಜನ ಸಾಮಾನ್ಯರನ್ನು ಬಿಚ್ಚಿ ಬೀಳಿಸಿದೆ. ಮೈಸೂರಿನ ಹೊರವಲಯದಲ್ಲಿ ಜೋಡಿ ಕೊಲೆಯಾಗಿದ್ದು, ಮಗನೇ ತಂದೆ ಹಾಗೂ ತಂದೆಯ ಜೊತೆಗಿದ್ದ ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾದ ಘಟನೆ ನಡೆದಿದೆ.

ಶ್ರೀನಗರದಲ್ಲಿ ಈ ಘಟನೆ ನಡೆದಿದೆ.  ಶಿವಪ್ರಕಾಶ್ (56) ಮತ್ತು ಲತಾ (48) ಕೊಲೆಯಾವರಾಗಿದ್ದಾರೆ.  ಇನ್ನು ಕೊಲೆ ಮಾಡಿದ ಸಾಗರ್ ಪರಾರಿಯಾಗಿದ್ದಾನೆ.  ನಿನ್ನೆ ( ಅ.21)  ರಾತ್ರಿ 9.30ಕ್ಕೆ ಈ ಘಟನೆ ನಡೆದಿದೆ.ಏಕಾಏಕಿ ಲತಾ ಮನೆಗೆ ನುಗ್ಗಿದ ಸಾಗರ್ ಮೊದಲು ತಂದೆಯನ್ನು ಮಚ್ಚಿನಿಂದ ಕೊಲೆ ಮಾಡಿದ್ದಾನೆ.ನಂತರ ಲತಾಳಿಗೆ ಮಚ್ಚಿನಿಂದ ಹಲ್ಲೆ ಮಾಡಿ ಕೊಲೆಗೈದಿದ್ದು, ಲತಾ ಮೇಲೆ ಹಲ್ಲೆಗೆ ಮುಂದಾದಾಗ ತಡೆಯಲು ಬಂದ ಲತಾ ಪುತ್ರ ನಾಗಾರ್ಜುನಿಗೂ ಸಾಗರ್ ಮಚ್ಚಿನಿಂದ ಹಲ್ಲೆಗೈದು ನಾಪತ್ತೆಯಾಗಿದ್ದಾನೆ. ಗಾಯಗೊಂಡಿರುವ ನಾಗಾರ್ಜುನ ಆಸ್ಪತ್ರೆ ದಾಖಲು ಮಾಡಲಾಗಿದೆ. ಈ ಕುರಿತು ಮೈಸೂರಿನ ದಕ್ಷಿಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಪ್ರಕಾಶ್ ಹಾಗೂ ಲತಾ ಕಳೆದ 14 ವರ್ಷಗಳಿಂದ ಪರಸ್ಪರ ಜೊತೆಗಿದ್ದರು. ಲತಾ ಪತಿ ಶಿವಪ್ರಕಾಶ್ ಸ್ನೇಹಿತರಾಗಿದ್ದರು. ಲತಾ ಪತಿ ಅಕಾಲಿಕ ಮರಣ  ನಂತರ ಶಿವಪ್ರಕಾಶ್ ಹಾಗೂ ಲತಾ ನಡುವೆ ಉತ್ತಮ ಬಾಂಧವ್ಯ ಇತ್ತು.ಇದು ಪ್ರಕಾಶ್ ಪುತ್ರ ಸಾಗರ್ ಕೆಂಗಣ್ಣಿಗೆ ಗುರಿಯಾಗಿದೆ. ಲತಾರಿಗೆ ಶಿವಪ್ರಕಾಶ್ ಸ್ವಂತ ಮನೆಯನ್ನು ಸಹ ಕಟ್ಟಿಸಿಕೊಟ್ಟಿದ್ದರು. ಈ ವಿಚಾರದಲ್ಲಿ ಶಿವಪ್ರಕಾಶ್ ಮೊದಲನೇ ಹೆಂಡತಿ ಹಾಗೂ ಪುತ್ರ ಸಾಗರ್ ಸಾಕಷ್ಟು ವಿರೋಧಿಸಿದ್ದರು. ಶಿವಪ್ರಕಾಶ್ ಹೆಚ್ಚಾಗಿ ಲತಾಳ ಜತೆ ಕಾಲ ಕಳೆಯುತ್ತಿದ್ದರು. ಇದರಿಂದ ರೊಚ್ಚಿಗೆದ್ದ ಸಾಗರ್ ಬರ್ಬರವಾಗಿ ಹತ್ಯೆ ಮಾಡಿದ್ದಾನೆ .

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಕ್ರೈಂ ಸುದ್ದಿ

To Top