Connect with us

Dvgsuddi Kannada | online news portal | Kannada news online

ನಮ್ಮೂರಿಗೆ ರಸ್ತೆಯಾಗುವರಿಗೆ ಮದುವೆಯಾಗಲ್ಲ ಎಂದ ಯುವತಿ ಊರಿಗೆ ದೌಡಾಯಿಸಿದ ಡಿಸಿ..!

h ramapura

ದಾವಣಗೆರೆ

ನಮ್ಮೂರಿಗೆ ರಸ್ತೆಯಾಗುವರಿಗೆ ಮದುವೆಯಾಗಲ್ಲ ಎಂದ ಯುವತಿ ಊರಿಗೆ ದೌಡಾಯಿಸಿದ ಡಿಸಿ..!

ದಾವಣಗೆರೆ: ನಮ್ಮೂರಿಗೆ ರಸ್ತೆಯಾಗುವರೆಗೂ ಮದುವೆಯಾಗಲ್ಲ ಎಂದು ಪಟ್ಟು ಹಿಡಿದ ಯುವತಿ ಬಿಂದು ಊರಿಗೆ ಡಿಸಿ ಮಹಾಂತೇಶ ಬೀಳಗಿ ದೌಡಾಯಿಸಿದ್ದಾರೆ.

ದಾವಣಗೆರೆ ತಾಲ್ಲೂಕಿನ ಗಡಿ ಗ್ರಾಮವಾದ ಎಚ್. ರಾಂಪುರಕ್ಕೆ ಗ್ರಾಮಕ್ಕೆ ಇಂದು ಭೇಟಿ ನೀಡಿದ  ಡಿಸಿ, ನಡುರಸ್ತೆಯಲ್ಲಿ ತಮ್ಮ ಕಾರು ನಿಲ್ಲಿಸಿ ನಡೆದುಕೊಂಡು ಗ್ರಾಮಕ್ಕೆ ತಲುಪಿದ್ದಾರೆ. ನಂತರ ಯುವತಿ ಜತೆ ಮಾತನಾಡಿ ಗ್ರಾಮದ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.

maykonda

ನಿಮ್ಮೂರಿಗೆ ರಸ್ತೆ, ಬಸ್ ವ್ಯವಸ್ಥೆ ಮಾಡಿಸುತ್ತೇವೆ.ಗೆ ನಿನಗೆ ಮದ್ವೆ ಕೂಡಾ ಮಾಡಿಸುತ್ತೇನೆ. ಒಳ್ಳೆ ಗಂಡು ಹುಡುಕಿ ಮದ್ವೆ ಮಾಡಿಸುವೆ ಎಂದು ಬಿಂದುಗೆ ಮಹಾಂತೇಶ ಬೀಳಗಿ ಭರವಸೆ ನೀಡಿದರು. ನಾಳೆಯಿಂದಲೇ ರಸ್ತೆ ಕಾಮಗಾರಿ ಆರಂಭಿಸಲಾಗುವುದು.  ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ  ಬಿಂದು,  ಬಾಗಲಕೋಟೆ ಜಿಲ್ಲೆಯ ಕೂಡಲ ಸಂಗಮದಲ್ಲಿ ಕಾರ್ಯ ನಿರ್ವಹಿಸುದ್ಧಾರೆ.

ಯುವತಿ ಬಿಂದು ನಮ್ಮೂರಿಗೆ ಸರಿಯಾದ ರಸ್ತೆ, ಬಸ್ ಇಲ್ಲ. ಭಯಾನಕ ಕಾಡು ಬೇರೆ, ರಾತ್ರಿಯಾದ್ರೆ ಓಡಾಡದು ತುಂಬಾ ಕಷ್ಟ. ಹೀಗಾಗಿ ನಮ್ಮೂರಿಗೆ ಕನ್ಯೆ ನೋಡಲು ಬಂದವರು ರಸ್ತೆ ನೋಡಿ ರಿಜೆಕ್ಟ್ ಮಾಡ್ತಿದ್ಧಾರೆ. ಹೀಗಾಗಿ ನಮ್ಮೂರಿಗೆ ರಸ್ತೆ ಆಗುವರೆಗೂ ನಾನು ಮದ್ವೆ ಆಗಲ್ಲ ಎಂದು ಸರ್ಕಾರಕ್ಕೆ  ಪತ್ರ ಬರೆದಿದ್ದರು. ಈ ಪತ್ರ ಮುಖ್ಯ ಕಾರ್ಯದರ್ಶಿ ಗಮನಕ್ಕೆ ಬಂದಿತ್ತು. ಇದೀಗ ಡಿಸಿ ಮಹಾಂತೇಶ ಬೀಳಗಿ ದೌಡಾಯಿಸಿದ್ದು, ಗ್ರಾಮದ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top