ದಾವಣಗೆರೆ: ಮಹಾನಗರ ಪಾಲಿಕೆ ವ್ಯಾಪ್ತಿಯ ದಾವಣಗೆರೆ ಸ್ಮಾರ್ಟ್ಸಿಟಿ ಲಿಮಿಟೆಡ್, ಯೋಜನೆಯಡಿ ವಿದ್ಯುತ್ ಕಂಬಗಳ ಸ್ಥಳಾಂತರ ಕಾಮಗಾರಿ ನಿರ್ವಹಿಸುತ್ತಿರುವುದರಿಂದ ಇಂದು ( ಏ.03) ರಂದು ಬೆಳಗ್ಗೆ 10 ರಿಂದ ಸಂಜೆ 4.30 ವರೆಗೆ 66/11ಕೆವಿಯರಗುಂಟಾ ವಿದ್ಯುತ್ ವಿತರಣಾಕೇಂದ್ರದಿಂದ ಹೊರಡುವ ಎಫ್6-ಶಿವಾಲಿ, ಎಫ್8-ವಿಜಯನಗರ, ಎಫ್16-ಎಸ್ಜೆಎಮ್ ಮತ್ತು ಎಫ್19-ಎಸ್ಟಿಪಿ 11ಕೆವಿ ಮಾರ್ಗಗಳ ವ್ಯಾಪ್ತಿಯಲ್ಲಿ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಎಫ್6-ಶಿವಾಲಿ ಫೀಡರ್ ವ್ಯಾಪ್ತಿಯ 11ಕೆವಿ ವ್ಯಾಪ್ತಿಯ :ಭಾಷನಗರ 1 ರಿಂದ 17ನೇ ಕ್ರಾಸ್, ರಿಂಗ್ರಸ್ತೆ, ಶಿವನಗರ ಸ್ವಲ್ಪ ಭಾಗ, ಮಿಲ್ಲತ್ ಕಾಲೋನಿ, ಬೀಡಿ ಲೇಔಟ್, ರಜಾವುಲ್ಲಾ ಮುಸ್ತಾಫ ನಗರ, ರಜಾಕ್ ಸರ್ಕಲ್, ಭಾಷನಗರ ಮುಖ್ಯರಸ್ತೆ, ಸುತ್ತಮುತ್ತ ಬೀಡಿ ಲೇಔಟ್, ಶಿವನಗರ, ರಜಾವುಲ್ಲಾ ಮುಸ್ತಾಫ್ ನಗರ, ಇಎಸ್ಐಆಸ್ಪತ್ರೆ ಹಿಂಭಾಗ ಹಾಗೂ ಮುಂಭಾಗ, ಭಾಷನಗರ ಮುಖ್ಯರಸ್ತೆ ಸುತ್ತಮುತ್ತ ಹಾಗೂ ಇತರೆ ಪ್ರದೇಶಗಳು.
ಎಫ್8-ವಿಜಯನಗರ ಫೀಡರ್ ವ್ಯಾಪ್ತಿಯ ದೇವರಾಜ್ಅರಸ್ ಬಡಾವಣೆ ‘ಬಿ’ ಬ್ಲಾಕ್ ಮತ್ತು ‘ಸಿ’ ಬ್ಲಾಕ್, ಎಸ್ಪಿ ಆಫೀಸ್, ಆರ್ಟಿಓಆಫೀಸ್, ವಿಜಯನಗರ ಬಡಾವಣೆ, ರಾಜೀವಗಾಂಧಿ ಬಡಾವಣೆ, ಎಸ್ಪಿಎಸ್ ನಗರ 2ನೇ ಹಂತ, ಎಸ್ಎಮ್ಕೆ ನಗರ, ವಾಲ್ಮೀಕಿ ಸರ್ಕಲ್ ಸುತ್ತಮುತ್ತ ಹಾಗೂ ಇತರೆ ಪ್ರದೇಶಗಳು.
ಎಫ್16-ಎಸ್ಜೆಎಮ್ ಫೀಡರ್ ವ್ಯಾಪ್ತಿಯ ಕೊಂಡಜ್ಜಿರಸ್ತೆ, ಎಸ್ಜೆಎಮ್ ನಗರ, ಸೇವಾದಳ ಕಾಲೋನಿ, ಹೊಸಕ್ಯಾಂಪ್, ಎಸ್ಎಮ್ಕೆ ನಗರ 2ನೇ ಹಂತ, ವೀರಾಂಜನೇಯ ಪೆಟ್ರೋಲ್ ಬಂಕ್ ಹತ್ತಿರ, ಬಿ.ಜೆ.ಎಮ್ ಸ್ಕೂಲ್, ಆರ್ಟಿಓಆಫೀಸ್, ಬೂದಿಹಾಳ್ ರಸ್ತೆ, ಬಾಬು ಜಗಜೀವನ್ರಾಮ್ ನಗರ, ಗೌರಸಂದ್ರ ಮಾರಮ್ಮದೇವಸ್ಥಾನದ ಸುತ್ತಮುತ್ತ ಹಾಗೂ ಇತರೆ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಇನ್ನು ದಾವಣಗೆರೆ ತಾಲ್ಲೂಕಿನ ಮಲ್ಪೆ-ಮೊಳಕಾಲ್ಮೂರು ರಾಜ್ಯ ಹೆದ್ದಾರಿ ರಸ್ತೆ ಬದಿಯಲ್ಲಿರುವ ವಿದ್ಯುತ್ ಕಂಬಗಳ ಸ್ಥಳಾಂತರಿಸುವ ಕಾಮಗಾರಿ ನಿರ್ವಹಿಸುವ ಸಲುವಾಗಿ ಏ.03 ರಂದು ಬೆಳಗ್ಗೆ 10 ರಿಂದ ಸಂಜೆ 6.30 ರವರೆಗೆ 220/66 ಕೆ.ವಿ. ಎಸ್ಆರ್ಎಸ್ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಫ್-21 ತರಳಬಾಳು 11ಕೆವಿ ವಿದ್ಯುತ್ ಮಾರ್ಗದಿಂದ ವಿದ್ಯುತ್ ಸರಬರಾಜಾಗುವ ಶಿರಮಗೊಂಡನಹಳ್ಳಿ, ನಾಗನೂರು, ನಾಗಮ್ಮಕೇಶವಮೂರ್ತಿ ನಗರ, ಬಿಸಲೇರಿ, 6ನೇ ಮತ್ತು 7ನೇ ಮೈಲಿಕಲ್ಲು, ಜವಳಘಟ್ಟ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ.



