ದಾವಣಗೆರೆ: ಮಾ. 13ರಂದು ನಡೆಯುವ ಕುರುವತ್ತಿ ಬಸವೇಶ್ವರ ರಥೋತ್ಸವ ಹಿನ್ನೆಲೆ ದಾವಣಗೆರೆಯಿಂದ ಆಯೋಜಿಸಲಾಗುತ್ತಿದ್ದ ಪಾದಯಾತ್ರೆಯನ್ನು ಕೊರೊನಾ ಕಾಟರಣದಿಂದ ರದ್ದುಗೊಳಿಸಲಾಗಿದೆ.
ಈ ಬಗ್ಗೆ ಪಾದಯಾತ್ರೆ ಸೇವಾ ಸಮಿತಿ ಮಾಹಿತಿ ನೀಡಿದ್ದು, ಪ್ರತಿ ವರ್ಷ ಪಾದಯಾತ್ರೆ ಯಲ್ಲಿ 4 ಸಾವಿರ ಭಕ್ತರು ಪಾಲ್ಗೊಳ್ಳುತ್ತಿದ್ದರು. ಪಾದಯಾತ್ರೆ ಮಾ. 11ರಿಂದ ಪ್ರಾರಂಭವಾಗಬೇಕಿತ್ತು.ಆದರೆ, ಕೊರೊನಾ ಕಾರಣದಿಂದ ಸಮಿತಿ ಪಾದಯಾತ್ರೆ ರದ್ದುಗೊಳಿಸಿದೆ. ಭಕ್ತರು ವೈಯಕ್ತಿಕವಾಗಿ ಪಾದಯಾತ್ರೆ ಹೋಗಬಹುದು. ಅನ್ನ ಸಂತರ್ಪಣೆ ರದ್ದು ಪಡಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ಸತ್ಯನಾರಾಯಣ ಸುದ್ದಿಗೋಷ್ಠಿಯಲ್ಲಿ ಹೇಳಿದರು.



