ದಾವಣಗೆರೆ: ಮಹಾನಗರ ಪಾಲಿಕೆ ಸ್ವಚ್ಛ ನಗರ ಪಟ್ಟಿಯಲ್ಲಿ ತಂಬಾ ಹಿಂದೆ ಉಳಿದಿದ್ದು, ಇದನ್ನು 10ನೇ ಸ್ಥಾನದ ಒಳಗೆ ತರುವ ಪ್ರಯತ್ನ ಮಾಡುವುದಾಗಿ ಮೇಯರ್ ಎಸ್.ಟಿ. ವೀರೇಶ್ ಹೇಳಿದರು. ದಾವಣಗೆರೆ ಮಹಾನಗರ ಪಾಲಿಕೆ ಸಾರ್ವಜನಿಕರು ತಮ್ಮ ಸಮಸ್ಯೆ ಪರಿಹಾರಕ್ಕೆ 8277234444 ನಂಬರ್ ಗೆ ವಾಟ್ಸಾಪ್ ಮಾಡಿ..!
ಪಾಲಿಕೆಯ ಸಾರ್ವಜನಿಕರ ಸಮಸ್ಯೆ ಪರಿಹಾರಕ್ಕೆ ವಾಟ್ಸಾಪ್ ಗೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು, ದಾವಣಗೆರೆ ಮಹಾಣಗರ ಪಾಲಿಕೆ ಸ್ವಚ್ಛ ನಗರ ಪಟ್ಟಿಯಲ್ಲಿ ತುಂಬಾ ಹಿಂದೆ ಇದೆ. ಇದನ್ನು 2 ವರ್ಷದಲ್ಲಿ 10ನೇ ಸ್ಥಾನಕ್ಕೆ ತರುವ ಯತ್ನ ಮಾಡುತ್ತೇನೆ. ಯಾರೂ ಕೂಡ ಮೇಯರ್ ಗೆ ಹಾರ, ಹೂವಿನ ಬೊಕೆ ತರಬಾರದು. ಹಾರು, ಬೊಕೆ ಬದಲು ಪುಸ್ತುಕಗಳನ್ನು ನೀಡಿ. ಈಗಾಗಲೇ 2 ಸಾವಿರ ಪುಸ್ತಕಗಳು ಬಂದಿದ್ದು,ಅವುಗಳನ್ನು ಸರ್ಕಾರಿ ಶಾಲೆಗಳಿಗೆ ನೀಡಲಾಗುವುದು ಎಂದರು.
ಇನ್ನು ಯಾರು ಕೂಡ ಸಭೆ, ಸಮಾರಂಭಗಳಿಗೆ ಕರೆಯಬೇಡಿ. ಸನ್ಮಾನ ಮಾಡುವುದಿದ್ದರೆ, ನನ್ನ ಅವಧಿ ಮುಗಿದ ಮೇಲೆ ಮಾಡಿ, ಕೆಲಸ ಮಾಡದೇ ಸನ್ಮಾನ ಮಾಡಿಸಿಕೊಳ್ಳುವುದು ಸರಿಯಲ್ಲ. ಹೀಗಾಗಿ ಸನ್ಮಾನ ಸಮಾರಂಭಗಳಿಗೆ ಕರೆಯಬೇಡಿ ಎಂದರು. ಜನರ ಸಮಸ್ಯೆ ಹಾಲಿಸಲು ವಾಟ್ಸಾಪ್ ಸಂಖ್ಯೆ: 8277234444 ರಚಿಸಿದ್ದು, ಸಾರ್ವಜನಿಕರು ಸಮಸ್ಯೆಗೆ ವಾಟ್ಸಾಪ್ ಮಾಡುವ ಮೂಲಕ ಪರಿಹಾರ ಕಂಡುಕೊಳ್ಳಬಹುದು. ಹಾಗೆಯೇ ಜನರ ಸಮಸ್ಯೆ ಅರಿಯಲು ಪ್ರತಿ ದಿನ ಒಂದು ವಾರ್ಡ್ ನ ಸದಸ್ಯರ ಜೊತೆ ಭೇಟಿ ನೀಡಿ ಸಮಸ್ಯೆ ಆಲಿಸುತ್ತೇನೆ ಎಂದು ತಿಳಿಸಿದರು.



