ಬೆಂಗಳೂರು: ವಿಧಾನಸಭೆ ಅಧಿವೇಶನದಲ್ಲಿ ಒಂದು ರಾಷ್ಟ್ರ, ಒಂದು ಚುನಾವಣೆ ಚರ್ಚೆ ನಡೆಯುತ್ತಿದ್ದು, ಇದಕ್ಕೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿತು. ಇದರಿಂದ ಕೆರಳಿದ ಮುಖ್ಯಮಂತ್ರಿ ಯಡಿಯೂರಪ್ಪ, ನೀವು ಚರ್ಚೆಗೆ ಒಪ್ಪಿಗೆ ನೀಡಿದ್ದೀರಿ. ಈ ಬಗ್ಗೆ ಯಾರು ಮಾತನಾಡುತ್ತೇವೆ ಅಂತಾನೂ ಪಟ್ಟಿಯನ್ನ ನೀಡಿದ್ದೀರಿ. ಒಪ್ಪಿಕೊಂಡು ಈಗ ಈ ರೀತಿ ಮಾತನಾಡೋದು ಸರಿಯಲ್ಲ ಎಂದು ವಾಗ್ದಾಳಿ ಕಿಡಿಕಾರಿದರು. ಸದನದಲ್ಲಿ ಶರ್ಟ್ ಬಿಚ್ಚಿದ ಭದ್ರಾವತಿ ಶಾಸಕ ಸಂಗಮೇಶ್; ಶಾಸಕರ ವರ್ತನೆಗೆ ಸ್ಪೀಕರ್ ಗರಂ; ಶಾಸಕರಿಗೆ ಒಂದು ವಾರ ಕಲಾಪದಿಂದ ನಿಷೇಧ
ವಿರೋಧ ಪಕ್ಷದವರಿಗೆ ಯಾವುದರಲ್ಲೂ ನಂಬಿಕೆ ಇಲ್ಲ. ನಿಮ್ಮ ನಡವಳಿಕೆ ನಾಚಿಕೆಗೇಡಿನ ಸಂಗತಿ, ರಾಜ್ಯದ ಜನ ನಿಮ್ಮನ್ನ ಕ್ಷಮಿಸಲ್ಲ ಎಂದು ಹರಿಹಾಯ್ದರು. ಒಂದು ರಾಷ್ಟ್ರ, ಒಂದು ಚುನಾವಣೆ ಬಗ್ಗೆ ಚರ್ಚೆ ಮಾಡಿ ನಂತರ ವಿರೋಧ ಮಾಡಿ. ಆದ್ರೆ, ಒಪ್ಪಿಕೊಂಡು ಈ ರೀತಿ ಮಾಡಿದ್ರೆ ಹೇಗೆ? ಆಡಳಿತ ದೃಷ್ಟಿಯಿಂದ ಇದು ಉತ್ತಮವಾಗಿದ್ದು, ಇದರಿಂದ ದೇಶದಲ್ಲಿ ಮಹತ್ವದ ಬದಲಾವಣೆ ಆಗಲಿದೆ. ಈ ಬಗ್ಗೆ ಸವಿಸ್ತಾರವಾಗಿ ಚರ್ಚೆ ನಡೆಯಲಿ ಎಂದರು.



