ದಾವಣಗೆರೆ: ಕೊಟ್ಟೂರು ಪಟ್ಟಣದಲ್ಲಿ ನಡೆಯುವ ಶ್ರೀ ಗುರು ಕೊಟ್ಟೂರೇಶ್ವರ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ವಿಶೇಷ ರೈಲಿನ ವ್ಯವಸ್ಥೆ ಮಾಡಲಾಗಿದೆ. ಮಾರ್ಚ್ 7ರಂದು ರಥೋತ್ಸವ ನಡೆಯಲಿದೆ. ಸಂಪ್ರದಾಯಿಕ ಪೂಜೆಯ ಆಚರಣೆಗೆ ಮಾತ್ರ ಅವಕಾಶ ನೀಡಲಾಗಿದೆ.
ಹಬ್ಬದ ಹಿನ್ನಲೆಯಲ್ಲಿ ಭಕ್ತರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆ ವಿಶೇಷ ರೈಲನ್ನು ಓಡಿಸಲಿದೆ. ಮಾರ್ಚ್ 6ರಿಂದ 8ರ ತನಕ ಈ ರೈಲುಗಳು ಸಂಚಾರ ನಡೆಸಲಿವೆ. ನೈಋತ್ಯ ರೈಲ್ವೆಯ ಹುಬ್ಬಳ್ಳಿ ವಲಯ ಹೊಸಪೇಟೆ-ದಾವಣಗೆರೆ-ಹೊಸಪೇಟೆ ನಡುವೆ ವಿಶೇಷ ರೈಲು ಸಂಚಸರಿಸಲಿದೆ. ಮುಂಗಡ ಟಿಕೆಟ್ ಕಾಯ್ದಿರಿಸದೇ ಈ ರೈಲಿನಲ್ಲಿ ಜನರು ಸಂಚಾರ ನಡೆಸಬಹುದಾಗಿದೆ.
ಮಾರ್ಚ್ 6 ರಿಂದ 8ರ ತನಕ ಮೂರು ದಿನಗಳು ಮಾತ್ರ ರೈಲು ಸಂಖ್ಯೆ 07333/07334 ಹೊಸಪೇಟೆ-ದಾವಣಗೆರೆ-ಹೊಸಪೇಟೆ ನಡುವೆ ಸಂಚಾರ ನಡೆಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಬಳ್ಳಾರಿ ಸಂಸದ ವೈ. ದೇವೇಂದ್ರಪ್ಪ ಫೆಬ್ರವರಿ 21ರಂದು ವಿಶೇಷ ರೈಲುಗಳನ್ನು ಓಡಿಸಬೇಕು ಎಂದು ರೈಲ್ವೆ ಇಲಾಖೆಗೆ ಪತ್ರವನ್ನು ಬರೆದಿದ್ದರು. ಈ ಪತ್ರದ ಅನ್ವಯ ವಿಶೇಷ ರೈಲು ಸಂಚಾರಕ್ಕೆ ರೈಲ್ವೆ ಇಲಾಖೆ ಒಪ್ಪಿಗೆ ನೀಡಿದೆ.
ಈ ಬಾರಿ ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಕೊಟ್ಟೂರೇಶ್ವರ ರಥೋತ್ಸವ ರದ್ದು ಮಾಡಲಾಗಿದೆ. ಸಂಪ್ರದಾಯಿಕ ಪೂಜೆಗಳನ್ನು ಮಾತ್ರ ದೇವಾಲಯದಲ್ಲಿ ನಡೆಸಲು ಅವಕಾಶವನ್ನು ನೀಡಲಾಗಿದೆ.
ಕೊಟ್ಟೂರು ಹಬ್ಬದ ಹಿನ್ನೆಲೆಯಲ್ಲಿ ನೈರುತ್ಯ ರೈಲ್ವೆಯು 06.03.2021ರಿಂದ 08.03.2021ರವರೆಗೆ ಮೂರು ದಿನಗಳ ಮಟ್ಟಿಗೆ ರೈ. ಸಂ. 07333/07334 ಹೊಸಪೇಟೆ-ದಾವಣಗೆರೆ-ಹೊಸಪೇಟೆ ಆರಕ್ಷಣಾರಹಿತ ವಿಶೇಷ ರೈಲನ್ನು ಓಡಿಸಲಿದೆ. #Hosapete #Davangere #Kottur #SWRRLYTrainupdates pic.twitter.com/4kiQq6uZ1l
— DRM Hubballi (@drmubl) March 3, 2021



