ಡಿವಿಜಿಸುದ್ದಿ.ಕಾಂ, ಬೆಂಗಳೂರು: ಸಾಹಿತಿ, ಹೋರಾಟಗಾರ ಕೆ.ಬಿ ಸಿದ್ದಯ್ಯ (70) ಇಂದು ಬೆಳಗ್ಗೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ.
80ರ ದಶಕದಲ್ಲಿ ದಲಿತ ಚಳವಳಿಯ ಮುಂಚೂಣಿಯಲ್ಲಿದ್ದವರು ಸಾಹಿತಿ ಕೆ ಬಿ ಸಿದ್ದಯ್ಯ. ಚಳವಳಿಯ ಹೋರಾಟಕ್ಕೆ ಅನುಗುಣವಾಗಿ ಕವಿತೆ ರಚಿಸಿ ಹಾಡುವ ಮೂಲಕ ಚಳವಳಿಗಾರಲ್ಲಿ ಉತ್ಸಾಹ ತುಂಬುತ್ತಿದ್ದರು.
ಸಿದ್ದಯ್ಯನವರು, ದಕ್ಕಲ ಕಥಾದೇವಿ,ಬಕಾಲ, ಗಲ್ಲೆಭಾನಿ ಸೇರಿ ಹಲವು ಖಂಡಕಾವ್ಯ ರಚಿಸಿದ್ದಾರೆ. ಶ್ರೀಸಿದ್ದಾರ್ಥ ಪದವಿ ಪೂರ್ವ ಕಾಲೇಜಿನಲ್ಲಿ ಇಂಗ್ಲೀಷ್ ಪ್ರಧ್ಯಾಪಕರಾಗಿ ಕಾರ್ಯನಿರ್ವಹಿಸಿ, ನಿವೃತ್ತರಾಗಿದ್ದರು.
ಕೆಲವು ದಿನಗಳ ಹಿಂದೆ ಅಪಘಾತಕ್ಕೆ ಒಳಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗಿನ ಜಾವ 4:15ರ ಸುಮಾರಿಗೆ ಕೊನೆಯುಸಿರೆಳೆದರು.