Connect with us

Dvgsuddi Kannada | online news portal | Kannada news online

ಭ್ರಷ್ಟಾಚಾರದ ವಿರುದ್ಧ ಕೇಸ್ ದಾಖಲಿಸಬೇಕಾ.. ಇನ್ಯಾಕೆ ತಡ, ಲೋಕಾಯುಕ್ತ ಅಹವಾಲು ಸಭೆಯಲ್ಲಿ ಭಾಗಿಯಾಗಿ ದೂರು ಸಲ್ಲಿಸಿ..

ದಾವಣಗೆರೆ

ಭ್ರಷ್ಟಾಚಾರದ ವಿರುದ್ಧ ಕೇಸ್ ದಾಖಲಿಸಬೇಕಾ.. ಇನ್ಯಾಕೆ ತಡ, ಲೋಕಾಯುಕ್ತ ಅಹವಾಲು ಸಭೆಯಲ್ಲಿ ಭಾಗಿಯಾಗಿ ದೂರು ಸಲ್ಲಿಸಿ..

ಡಿವಿಜಿಸುದ್ದಿ.ಕಾಂ, ದಾವಣಗೆರೆ: ಸರ್ಕಾರಿ ಕಚೇರಿಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ದುರಾಡಳಿತ, ವಿಳಂಬ ನೀತಿ, ಕಳಪೆ ಕಾಮಗಾರಿ, ಹಣ ದುರುಪಯೋಗ , ಸರ್ಕಾರದ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಿಸಲು ತಾರತಮ್ಯ ನೀತಿ ಅನುಸರಿಸಲಾಗುತ್ತಿದೆಯಾ..?  ಈ ಬಗ್ಗೆ  ದೂರು ಸಲ್ಲಿಸುವುದು ಸುಲಭ.

ಹೌದು, ಸಾರ್ವಜನಿಕರು  ನಿಮ್ಮ ಸುತ್ತಮುತ್ತ ಯಾವುದೇ ತರಹದ ಭ್ರಷ್ಟಾಚಾರ ನಡೆಯುತ್ತಿದ್ದರೆ, ಕರ್ನಾಟಕ ಲೋಕಾಯುಕ್ತ ಪೊಲೀಸ್ ನಿಂದ  ಅ. 15 ರಿಂದ 17 ರವರೆಗೆ ದಾವಣಗೆರೆಯಲ್ಲಿ ಜಿಲ್ಲಾ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿದೆ. ಸೂಕ್ತ ದಾಖಲೆಗಳೊಂದಿಗೆ ದೂರು ದಾಖಲಿಸಬಹುದು.

ಅ.15, 16 ಮತ್ತು 17 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.30 ರವರೆಗೆ ಕ್ರಮವಾಗಿ ಹೊನ್ನಾಳಿ, ಚನ್ನಗಿರಿ, ನ್ಯಾಮತಿ, ಜಗಳೂರು ಪ್ರವಾಸಿ ಮಂದಿರಗಳಲ್ಲಿ ಟಿ.ಎಸ್.ಮುರುಗೇಶ್ ಹಾಗೂ ದ ಹರಿಹರ, ದಾವಣಗೆರೆ ಜಿಲ್ಲಾಡಳಿತ ಭವನದಲ್ಲಿ  ಎಲ್.ಆರ್.ಲಕ್ಷ್ಮೀಪತಿ  ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವರು.

ಹೆಚ್ಚಿನ ಮಾಹಿತಿಗೆ: 08192-230164 ಗೆ ಸಂಪರ್ಕಿಸಬಹುದೆಂದು ಲೋಕಾಯುಕ್ತ ಪ್ರಭಾರ ಪೋಲಿಸ್ ಅಧೀಕ್ಷಕ ಕೆ.ಸಿ. ಪುರುಷೋತ್ತಮ್ ತಿಳಿಸಿದ್ದಾರೆ.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

ದಾವಣಗೆರೆ

Advertisement
Advertisement Enter ad code here

Title

To Top