ಬೆಂಗಳೂರು : ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಖಾತೆ ಹಂಚಿಕೆ ಮಾಡಿದ ನಂತರ ಇದೀಗ ಖಾತೆ ಕ್ಯಾತೆ ಶುರುವಾಗಿದೆ. ಇದೀಗ ಬಹಿರಂಗವಾಗಿಯೇ ನೂತನ ಸಚಿವರ ಅಸಮಾಧಾನ ಹೊರ ಹಾಕಿದ್ಧಾರೆ. ನೂತನ ಸಚಿವ ಎಂಟಿಬಿ ನಾಗರಾಜ್, ಅಬಕಾರಿ ಸಚಿನಾಗಿ ಮಾಡೋ ಕೆಲಸ ಏನಿದೆ.? ನಾನು ಸಿಎಂ ಯಡಿಯೂರಪ್ಪಗೆ ಅಬಕಾರಿ ಇಲಾಖೆ ಬೇಡ ಎಂದು ಹೇಳಿದ್ದೇನೆ ಎಂಬುದಾಗಿ ಹೇಳುವ ಮೂಲಕ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.
ಸಿಎಂ ಯಡಿಯೂರಪ್ಪ ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಸತಿ ಖಾತೆಗೆ ರಾಜೀನಾಮೆ ನೀಡಿ ಬಂದಿದ್ದೇನೆ. ಅಬಕಾರಿ ಇಲಾಖೆ ಬೇಡ ಎಂದು ಸಿಎಂಗೆ ಹೇಳಿದ್ದೇನೆ. ಇದು ನಾನು ಕೆಲಸ ಮಾಡುವ ಖಾತೆ ಅಲ್ಲ. ಅಬಕಾರಿಯಲ್ಲಿ ಮಾಡುವ ಕೆಲಸ ಏನಿದೆ.? ಬಡವರಿಗೆ ಸೈಟ್, ಮನೆ ಕೊಡುವ ಕೆಲಸ ಮಾಡಬಹುದು ಎಂಬುದಾಗಿ ಹೇಳುವ ಮೂಲಕ, ಪರೋಕ್ಷವಾಗಿ ವಸತಿ ಖಾತೆ ಬೇಕೆಂದು ಎಂಟಿಬಿ ನಾಗರಾಜ್ ಬೇಡಿಕೆ ಇಟ್ಟಿದ್ದಾರೆ.



