ಡಿವಿಜಿಸುದ್ದಿ.ಕಾಂ, ದಾವಣಗೆರೆ: ಹೊಸ ಕುಂದುವಾಡ ಗ್ರಾಮದಲ್ಲಿ ಶ್ರೀ ದುರ್ಗಾದೇವಿಯ ಕೆಂಡ ಅರ್ಚನೆ ಅದ್ದೂರಿಯಾಗಿ ನಡೆಯಿತು. ಪ್ರತಿ ವರ್ಷದಂತೆ ದಸರಾ ಹಬ್ಬ ಮುಗಿದ ನಂತರ ದುರ್ಗಾದೇವಿಯ ಅಗ್ನಿಕುಂಡ ಆಯುವ ಸಂಪ್ರದಾಯ ಮಾಡುತ್ತಾ ಬರಲಾಗಿದೆ. ಈ ಬಾರಿಯೂ ಭಕ್ತರು ದೇವಿಯ ಪಲ್ಲಕ್ಕಿಯನ್ನು ಹೊತ್ತು ಅಗ್ನಿಕುಂಡ ಆಯುವ ಸಂಪ್ರದಾಯ ನೆರವೇರಿಸಿದರು.
ಅಗ್ನಿಕುಂಡಕ್ಕೂ ಮುನ್ನ ಇಂದು ಬೆಳಗ್ಗೆ ದೇವಿಯ ಪಲ್ಲಕ್ಕಿ ಹೊತ್ತು ಕುಂದುವಾಡ ಕೆರೆ ಏರಿ ಮೇಲೆ ಬನ್ನಿ ಮುಡಿದರು. ಹೊಸಕುಂದುವಾಡದ ದುರ್ಗಾಂಬಿಕ ದೇವಸ್ಥಾನದ ಆವರಣದಲ್ಲಿ ವಿಜೃಂಭಣೆಯಿಂದ ಭಕ್ತರು ದೇವಿಯ ಪಲ್ಲಕ್ಕಿ ಹೊತ್ತು ಅಗ್ನಿ ಪ್ರವೇಶಿಸಿ ಭಕ್ತಿ ಸಮರ್ಪಿಸಿದರು.
ಗ್ರಾಮದ ಜನರು ಹಾಗೂ ಅಕ್ಕಪಕ್ಕದ ಊರಿನವರು ದೇವಿ ಅಗ್ನಿ ಪ್ರವೇಶಿಸುವುದನ್ನು ನೋಡಿ ಭಕ್ತರು ದೇವರ ಕೃಪೆಗೆ ಪಾತ್ರರಾದರು. ಶ್ರೀ ದುರ್ಗಾಂಬಿಕ ದೇವಸ್ಥಾನದ ನೂತನ ಕಟ್ಟಡದ ಉದ್ಘಾಟನೆ ಮತ್ತು ದೇವಿಯ ಪ್ರತಿಷ್ಠಾಪನೆ ಮಹೋತ್ಸವ ನೆರವೇರಿಸಲಾಗಿತ್ತು. ಈ ಸಂದರ್ಭದಲ್ಲಿ ಊರಿನ ಗ್ರಾಮಸ್ಥರು ಭಾಗಿಯಾಗಿದ್ದರು.
ಈ ಪ್ರಕರಣ ಭೇದಿಸುವಲ್ಲಿ ಚನ್ನಗಿರಿ ವೃತ್ತ



