ದಾವಣಗೆರೆ: ಸಿದ್ದರಾಮಯ್ಯ ಕುರುಬರಿಗೆ ಎಸ್ಟಿ ಮೀಸಲಾತಿ ಬೇಡ ಎಂದು ಹೇಳಿಲ್ಲ. ಸಿದ್ಧರಾಮಯ್ಯ ಅವರು ಪ್ರತ್ಯೇಕವಾಗಿ ಹೋರಾಟ ಮಾಡುವುದಾದ್ರೆ ಮಾಡಲಿ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿರಂಜನಾನಂದ ಪುರಿ ಸ್ವಾಮೀಜಿ ಹಾಗು ನಾನು ಎಸ್ಟಿ ಮೀಸಲಾತಿ ಹೋರಾಟಕ್ಕೆ ಬದ್ಧರಿದ್ದೇವೆ. ಹೋರಾಟದ ದಿಕ್ಕಿನಲ್ಲಿ ನಾವು ಹೊರಟಿದ್ದೇವೆ . ಕುರುಬರ ಸಮುದಾಯ ಜೊತೆಯಲ್ಲಿ ನಾವು ಹೊರಟಿದ್ದೇವೆ. ಸಮಾಧಾನ ಇದ್ದರೆ ಸಿದ್ದರಾಮಯ್ಯ ನಮ್ಮ ಜೊತೆ ಬರಲಿ. ಇಲ್ಲದಿದ್ದರೆ ಅವರ ಹೋರಾಟ ಅವರು ಮಾಡಲಿ. ಮೀಸಲಾತಿ ಹೋರಾಟದಲ್ಲಿ ಯಾವುದೇ ಗೊಂದಲವಿಲ್ಲ ಎಂದು ತಿಳಿಸಿದರು.



