ಹರಪನಹಳ್ಳಿ: ಜನವರಿ 14 ಮತ್ತು 15 ರಂದು ಹರಿಹರ ಪಂಚಮಸಾಲಿ ಜಗದ್ಗುರು ಪೀಠದಲ್ಲಿ ಹರ ಜಾತ್ರಾ ಮಹೋತ್ಸವ ನಡೆಯುವ ಹಿನ್ನೆಲೆ ಶ್ರೀ ವಚನಾನಂದ ಸ್ವಾಮೀಜಿ ಅವರು ಹರಪನಹಳ್ಳಿ ತಾಲ್ಲೂಕಿನಲ್ಲಿ ಗ್ರಾಮ ದರ್ಶನ ಕಾರ್ಯಕ್ರ ಹಮ್ಮಿಕೊಂಡಿದ್ದರು. ತಾಲೂಕಿನ ಚಿಕ್ಕಮೆಗಳಗೆರೆ, ಯು ಬೇವಿನಹಳ್ಳಿ, ಉಚ್ಚಂಗಿದುರ್ಗ, ಅಡವಿಹಳ್ಳಿ, ಅರಸಿಕೆರೆ, ತೌಡೂರು, ಬೆಂಡಿಗೆರೆ, ಕಂಚಿಕೆರೆ, ಸತ್ತೂರು ಗ್ರಾಮಗಳಿಗೆ ಭೇಟಿ ನೀಡಿ ಹರ ಜಾತ್ರಾ ಮಹೋತ್ಸವಕ್ಕೆ ಸದ್ಭಕ್ತರನ್ನು ಆಹ್ವಾನಿಸಿದರು.

ಉಚ್ಚoಗಿದುರ್ಗದ ಚತುರ್ದಶಿ ವಿಶ್ರಾಂತಿ ಗೃಹದಲ್ಲಿ ಹಮ್ಮಿಕೊಂಡಿದ್ದ ಗ್ರಾಮ ದರ್ಶನ ನಲ್ಲಿ ಮಾತನಾಡಿದ ಅವರು, ಚುನಾವಣೆಯನ್ನು ಹೋಳಿಹಬ್ಬದಂತೆ ಆಚರಿಸಿ. ಹೋಳಿ ಹಬ್ಬದ ಸಂದರ್ಭದಲ್ಲಿ ಪ್ರತಿಯೊಬ್ಬರೂ ಒಬ್ಬರ ಮೇಲೆ ಇನ್ನೊಬ್ಬರು ಬಣ್ಣವನ್ನು ಎರಚುವುದು ಸಾಮಾನ್ಯ. ಚುನಾವಣೆ ಮುಗಿದ ಮೇಲೆ ಪ್ರತಿಯೊಬ್ಬರೂ ತಮಗೆ ಹಾಕಿದ ಬಣ್ಣವನ್ನು ತೊಳೆದುಕೊಳ್ಳುವಂತೆ ದ್ವೇಷವನ್ನು ಬಿಟ್ಟು ಸಹೋದರರಂತೆ ಬಾಳಿ ಎಂದು ಕರೆ ನೀಡಿದರು.ಈ ಸಂದರ್ಭದಲ್ಲಿ ಗ್ರಾಮದ ಎಲ್ಲಾ ಸಮಾಜದ ಮುಖಂಡರು ಭಾಗವಹಿಸಿದ್ದರು.



