ಬೆಂಗಳೂರು : ಸಿಎಂ ಯಡಿಯೂರಪ್ಪಗೆ ಮಾನ ಮರ್ಯಾದೆ ಇದ್ದರೆ, ಕೂಡಲೇ ರಾಜೀನಾಮೆ ನೀಡಲಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ಧಾಳಿ ನಡೆಸಿದ್ದಾರೆ.
ಡಿನೋಟಿಫಿಕೇಶನ್ ಪ್ರಕರಣದ ಎಫ್ ಐ ಆರ್ ರದ್ದು ಮಾಡಿ ಎಂದು ಯಡಿಯೂರಪ್ಪ ಹೈಕೋರ್ಟ್ ಗೆ ಅರ್ಜಿ ಹಾಕಿದ್ದರು. ಆದರೆ ಹೈಕೋರ್ಟ್ ಎಫ್ ಐ ಅರ್ ರದ್ದು ಮಾಡಲು ಆಗಲ್ಲ ಎಂದು ತನಿಖೆ ನಡೆಸಲು ಸೂಚಿಸಿದೆ. ಲೋಕಾಯುಕ್ತ ಸ್ಪೆಷಲ್ ಕೋರ್ಟ್ ನ ನಿಗಾದಲ್ಲಿ ತನಿಖೆ ನಡೆಸುವಂತೆ ಕೋರ್ಟ್ ಆದೇಶ ನೀಡಿದ್ದು, ಯಡಿಯೂರಪ್ಪನವರ ವಿರುದ್ಧ ತನಿಖೆ ನಡೆಯಲಿದೆ.
ಯಡಿಯೂರಪ್ಪ ಸಿಎಂ ಆಗಿರುವುದರಿಂದ ತನಿಖಾ ಸಂಸ್ಥೆಗಳು ಅವರ ಅಡಿಯಲ್ಲೇ ಬರುತ್ತೆ, ಆದ್ದರಿಂದ ಅವರು ಅಧಿಕಾರದಲ್ಲಿರಬಾರದು. ಸಿಎಂ ಯಡಿಯೂರಪ್ಪಗೆ ಮಾನ ಮರ್ಯಾದೆ ಇದ್ರೆ ರಾಜೀನಾಮೆ ನೀಡಲಿ ಎಂದಿದ್ದಾರೆ.



