ದಾವಣಗೆರೆ : ದಾವಣಗೆರೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಸಮಾಜ ಕಲ್ಯಾಣ ಇಲಾಖೆ ಕಚೇರಿಯಲ್ಲಿಯೇ ಆತ್ಮಹತ್ಯೆ ಶರಣಾಗಿದ್ದಾರೆ.
ದಾವಣಗೆರೆ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಕೊಠಡಿಯಲ್ಲಿ ಅಧೀಕ್ಷಕ ಶಿವಕುಮಾರ್ (48 ) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಶಿವಕುಮಾರ್ , ಇಂದು ಬೆಳಿಗ್ಗೆ ಎಂದಿನಂತೆ ಕಚೇರಿ ತೆರೆದಾಗ ಮೃತಪಟ್ಟಿರುವುದು ಪತ್ತೆಯತಾಗಿದೆ.
ಕಚೇರಿ ಪ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಗೆ ಕಾರಣ ನಿಗೂಢವಾಗಿದೆ. ಕಳೆದ ನವಂಬರ್ 21 ರಿಂದ ಡಿಸಂಬರ್ 11 ರ ವರೆಗು ರಜೆಯಲ್ಲಿದ್ದ ಶಿವಕುಮಾರ್ , ಕಳೆದ ವಾರವಷ್ಟೇ ದಾವಣಗೆರೆ ತಪೋವನದಲ್ಲಿ ಮಾನಸಿಕ ಒತ್ತಡಕ್ಕೆ ಚಿಕಿತ್ಸೆ ಪಡೆದಿದ್ದರು. ಡಿಸಂಬರ್ 11 ರಂದು ಕರ್ತವ್ಯಕ್ಕೆ ಹಾಜರಾಗಿದ್ದರು. ಪತ್ನಿ ಇಬ್ಬರು ಮಕ್ಕಳನ್ನು ಹೊಂದಿರುವ ಶಿವಕುಮಾರ್, ನಿನ್ನೆ ಮಧ್ಯಾಹ್ನದ ಮನೆಬಿಟ್ಟಿದ್ದರು. ಕಳೆದ ರಾತ್ರಿ ಮಕ್ಕಳು ಪತ್ನಿ ಪೋನ್ ಮಾಡಿದ್ರು ಪೋನ್ ಪಿಕ್ ಮಾಡಿರಲಿಲ್ಲ.



