ಬೆಂಗಳೂರು : ರಾಜ್ಯ ವಿಧಾನ ಪರಿಷತಿನ ಕಾಂಗ್ರೆಸ್ ಸದಸ್ಯರಿಂದ ಸಭಾಪತಿಗಳನ್ನು ಎಳೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ-ಜೆಡಿಎಸ್ ಸದಸ್ಯರು ಪಾದಯಾತ್ರೆ ಮೂಲಕ ರಾಜಭವನಕ್ಕೆ ತೆರಳಿ, ಕಾಂಗ್ರೆಸ್ ವಿರುದ್ಧ ದೂರು ನೀಡುವುದಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವಿಶ್ವಾಸ ನಿರ್ಣ ನಿರ್ಧಾರದ ನಂತ್ರ ಇಂತಹ ಘಟನೆ ನಡೆದಿದ್ದು ನಿಜಕ್ಕೂ ಖಂಡನೀಯವಾಗಿದೆ. ಪರಿಷತ್ ನಲ್ಲಿ ನಡೆದಂತ ಕಾಂಗ್ರೆಸ್ ಹೈಡ್ರಾಮ ಕಾಂಗ್ರೆಸ್ ಗೆ ಶೋಭೆ ತರುವಂತದ್ಧಲ್ಲ. ಈ ಘಟನೆಯ ಸಂಬಂಧ ಬಿಜೆಪಿಯ ವಿಧಾನಸಭೆ, ಪರಿಷತ್ ಸದಸ್ಯರು, ಹಾಗೂ ಜೆಡಿಎಸ್ ಸದಸ್ಯರು ಮೆರವಣಿಗೆ ಮೂಲಕ ರಾಜಭವನಕ್ಕೆ ತೆರಳಿ, ಘಟನೆಯ ಸಂಬಂಧ ಕಾಂಗ್ರೆಸ್ ವಿರುದ್ಧ ಶಿಸ್ತು ಕ್ರಮಕ್ಕಾಗಿ ಮನವಿ ಸಲ್ಲಿಸಲಾಗುತ್ತದೆ ಎಂದರು.



