ಡಿವಿಜಿಸುದ್ದಿ.ಕಾಂ, ದಾವಣಗೆರೆ: ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ದಾವಣಗೆರೆಯ ಜಿಲ್ಲಾ ವಾಲ್ಮೀಕಿ ನಾಯಕ ಯುವ ಘಟಕದಿಂದ ಬೈಕ್ ಜಾಥಾ ನಡೆಸಲಾಯಿತು. ನಗರದ ಹೊಂಡಾ ಸರ್ಕಲ್ನ ಮದಕರಿ ನಾಯಕ ವೃತ್ತದಿಂದ 5ನೇ ವರ್ಷದ ಬೃಹತ್ ಬೈಕ್ ಜಾಥಾಕ್ಕೆ ಸಮಾಜದ ಮುಖಂಡರಿಂದ ಚಾಲನೆ ನೀಡಲಾಯಿತು.
ಜಾಥಾದಲ್ಲಿ ಸಮಾಜದ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಭಾಗಿಯಾಗಿದ್ರು. ಕೇಸರಿ ಪೇಟ ತೊಟ್ಟ ಯುವಕರು ನಗರದ ಪ್ರಮುಖ ಬೀದಿಯಲ್ಲಿ ವಾಲ್ಮೀಕಿ ಜಯಂತಿ ಜನಜಾಗೃತಿ ಮೂಡಿಸಿದರು. ನಗರದ ಪ್ರಮುಖ ಬೀದಿಯಲ್ಲಿ ಪಟಾಕಿ ಸಿಡಿಸಿ ಮಹರ್ಷಿ ವಾಲ್ಮೀಕಿ ಶ್ರೀಗಳಿಗೆ ಜೈಕಾರ ಹಾಕಿ ಸಂಭ್ರಮಿಸಿದರು.
ಹೊಂಡಾ ಸರ್ಕಲ್ ನಿಂದ ದುಗ್ಗಮ್ಮನ ದೇವಸ್ಥಾನ, ಬಂಬೂ ಬಜಾರ್ ಹಾಗೂ ನಿಟ್ಟುವಳ್ಳಿಯ ವರೆಗೂ ಜಾಥಾ ನಡೆಸಿದರು. ಯುವ ಘಟಕದ ಮುಖಂಡರಾದ ಡಿ.ಜಿ.ಮಂಜುನಾಥ್, ವಿನಾಯಕ ಪೈಲ್ವಾನ್, ಶಾಮನೂರು ಪ್ರವೀಣ್, ಐಗೂರು ಹನುಮಂತಪ್ಪ, ಅಳಗೋಡಿರಾಜು, ಸುರೇಶ್, ಸತೀಶ್, ಕುಮಾರ್, ಷಣ್ಮುಖ ಆರ್ ಲಕ್ಷ್ಮಣ್ ಸೇರಿದಂತೆ ಸಮಾಜ ಮುಖಂಡರು ಭಾಗಿಯಾಗಿದ್ರು.



