ಬೆಂಗಳೂರು : ಚುನಾವಣೆಗೆ ಪಕ್ಷ ನೀಡಿದ್ದ ಹಣವನ್ನು ಸಿ. ಪಿ. ಯೋಗೇಶ್ವರ್ ಹಾಗೂ ಎನ್. ಆರ್. ಸಂತೋಷ್ ಲಪಟಾಯಿಸಿದ್ದರು ಎಂದು ಕಿಡಿಕಾರಿದ್ದ ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಹೇಳಿಕೆಯ ಆಧಾರದ ಮೇರೆಗೆ ಕಾಂಗ್ರೆಸ್ ನಿಯೋಗ ಎಸಿಬಿಗೆ ದೂರು ನೀಡಿದೆ.
ವಿಶ್ವನಾಥ್ ಅವರೇ ಅಕ್ರಮ ಹಣದ ಬಗ್ಗೆ ಹೇಳಿಕೆ ನೀಡಿದ್ದಾರೆ. ಚುನಾವಣೆಯ ಅಕ್ರಮ ಹಣದ ಬಗ್ಗೆ ಮಾತನಾಡಿದ್ದು, ಯೋಗೇಶ್ವರ್ ಹಾಗೂ ಸಂತೋಷ್ ಹಣ ಲಪಟಾಯಿಸಿದ್ದಾರೆ. ಎಲೆಕ್ಷನ್ ಗಾಗಿ ಎಷ್ಟು ಹಣ ಸುರಿದಿದ್ದಾರೆ. ಹಣ ಸುರಿದು ಚುನಾವಣೆಯಲ್ಲಿ ಗೆದ್ದು ಬಂದರಾ..? ಇಲ್ಲಿ ಭ್ರಷ್ಟಾಚಾರ ನಡೆದಿರುವುದು ಸ್ಪಷ್ಟವಾಗಿದೆ. ಹೀಗಾಗಿ ಯೋಗೇಶ್ವರ್ ಹಾಗೂ ಸಂತೋಷ್ ಗೆ ಹಣ ನೀಡಿದ್ದರ ಬಗ್ಗೆ ತನಿಖೆ ನಡೆಸಬೇಕು ಎಂದು ಮಾಜಿ ಸಂಸದ ಉಗ್ರಪ್ಪ ನೇತೃತ್ವದ ನಿಯೋಗ ಎಸಿಬಿಗೆ ದೂರು ನೀಡಿದೆ.



