ಹಿಂಗಾರು ಹಂಗಾಮಿನಯಲ್ಲಿ ರೈತರು ಗಮನಿಸಬೇಕಾದ ಕೆಲವು ಸಲಹೆಗಳು

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
1 Min Read
  • ಶೇಂಗಾ ಬಿತ್ತಲು ಸಕಾಲ. ತಡವಾದಂತೆ.. ಸಮಸ್ಯೆ ಉಂಟು. ಬೀಜೋಪಚಾರ; ಟ್ರೈಕೋಡರ್ಮಾ ಸಂವರ್ಧಿತ ಕೊಟ್ಟಿಗೆ ಗೊಬ್ಬರ, ಜಿಜಿಂಬೋ (ಜಿಪ್ಸಂ, ಜಿಂಕ್,ಬೋರಾನ್) ಬಳಕೆ ಅತ್ಯಗತ್ಯ.
  • ನೀರಾವರಿಯಲ್ಲಿ ಗೋಧಿ ಬಿತ್ತನೆಗೆ ಸಕಾಲ. ಎಕರೆಗೆ 60 ಕೆಜಿ ಬೀಜ ಒಮ್ಮುಖ ಬಿತ್ತನೆ, ಬೀಜೋಪಚಾರ, ಸಮಗ್ರ ಪೋಷಕಾಂಶಗಳ ನಿರ್ವಹಣೆ ಅತ್ಯಗತ್ಯ.
  • ನೀರಾವರಿಯಲ್ಲಿ ಕಡಲೆ ಬಿತ್ತುವುದು ಲಾಭದಾಯಕ. ಅಗತ್ಯ ಸಲಹೆ ಪಡೆಯ‌ಬಯಸುವವರಿಗೆ ಸದಾ ಸ್ವಾಗತ.
  • ಹೆಸರು, ಉದ್ದು, ಅಲಸಂದೆ ಸೋಯಾ ಅವರೆ ಈಗ ಬಿತ್ತಬಾರದು.
  • ತಿಂಗಳವರೆ, ಕ್ಷೇತ್ರ ಅವರೆ ಬಿತ್ತನೆಗೆ ಸಕಾಲ.
  • ಹಿಂಗಾರಿ ಜೋಳದಲ್ಲಿ ಸುಳಿ ನೊಣ, ಚುಕ್ಕೆ ಲದ್ದಿ ಹುಳು, ಹತೋಟಿ ಬಗ್ಗೆ ಆದ್ಯತೆ ಇರಲಿ.
  • ಎಡೆ ಹೊಡೆದು ಬೀಡು ಮುಚ್ಚುವುದು ಅತ್ಯಗತ್ಯ.
  • ಕೂಳೆ ಕಬ್ಬು ಮಾಡುವವರು.. ರೋಗ ಬಾಧಿತ ಬುಡ ಕಿತ್ತು ಹಾಕಿ. ಸಾಗುಣಿ (ಗ್ಯಾಪ್) ಇದ್ದಲ್ಲಿ (ಕ್ಷೇತ್ರದ ಅಂಚಿನ ಸಾಲಗಳ ಬುಡ ಕಿತ್ತು ) ಅವುಗಳನ್ನು ತುಂಬಿರಿ. ಸೋಗೆ (ರವುದಿ) ಸುಡದೇ ಜಿಜಿಂಬೋ (ಜಿಪ್ಸಂ, ಜಿಂಕ್, ಬೋರಾನ್) ಬೆರೆಸಿ ಟ್ರ್ಯಾಶ್ ಕಟರ್ ಬಳಸಿ ಮುಚ್ಚಿಗೆ ಮಾಡಿ. ಗ್ಯಾಪ್ ತುಂಬದಿದ್ದಲ್ಲಿ ಕುಳೆ ಬೆಳೆ ಇಳುವರಿ ಕಡಿಮೆಯಾಗುವುದು. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 9449082829

 

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *