ಕಲಾವಿದನ ಬದುಕೇ ವಿಭಿನ್ನ: ಹಿರಿಯ ಸಾಹಿತಿ ಬಳ್ಳಾರಿ ರೇವಣ್ಣ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
1 Min Read

ಡಿವಿಜಿಸುದ್ದಿ.ಕಾಂ, ತುಮಕೂರು:  ಒಬ್ಬ ಸಾಮಾನ್ಯ ವ್ಯಕ್ತಿ  ಜೀವನ ನೋಡುವ ದೃಷ್ಟಿಕೋನಕ್ಕೂ ಕಲಾವಿದ ನೋಡುವ ದೃಷ್ಟಿಕೋನಕ್ಕೂ ವಿಭಿನ್ನವಾಗಿರುತ್ತದೆ ಎಂದು ಹಿರಿಯ ಸಾಹಿತಿ ಮತ್ತು ನ್ಯಾಯವಾದಿ ಬಳ್ಳಾರಿ ರೇವಣ್ಣ ಅಭಿಪ್ರಾಯಪಟ್ಟರು.

ತುಮಕೂರು ಬಾಲ ಭವನದಲ್ಲಿ ಆಯೋಜಿಸಿದ್ದ ರಂಗ ತೇರುಗಳ ನಾಟಕೋತ್ಸವದಲ್ಲಿ ಮಾತನಾಡಿದ ಅವರು, ರಂಗ ಕ್ಷೇತ್ರವೆಂದರೆ  ನಮ್ಮೆಲ್ಲರ ಬದುಕು ಬಿಚ್ಚಿಡುವ ಅದ್ಭುತ ಕಲಾ ವೇದಿಕೆ. ಒಬ್ಬ ಸಾಮಾನ್ಯ ವ್ಯಕ್ತಿ ಜೀನವನ್ನು ನೋಡುವ ಬಗೆಗೂ,  ಒಬ್ಬ ಕಕಲಾವಿದ  ಜೀವನ ನೋಡುವ ದೃಷ್ಟಿಕೋನಕ್ಕೂ ತುಂಬಾ ವ್ಯತ್ಯಾಸವಿರುತ್ತದೆ ಎಂದರು.

ಇದನ್ನೇ ಸಾಹಿತಿ ಬೀ.ಚಿ. ಅವರು ಕಲಾವಿದ ಎಲ್ಲರಂತೆ ಜೀವನ ನೋಡುವುದಿಲ್ಲ. ತನಗೆ ತಿಳಿದಂತೆ ತಾನು  ನೋಡುತ್ತಾನೆ ಎಂದಿದ್ದಾರೆ. ಇನ್ನು ಇಂಗ್ಲಿಷ್ ಕವಿ ಶೇಕ್ಸ್ ಪಿಯರ್ ಹೇಳುವಂತೆ ರಂಗ ವೇದಿಕೆ ಎಲ್ಲರ ಮುಖಗಳನ್ನು ತೆರೆದಿಡುತ್ತದೆ ಎಂದು ತಿಳಿಸಿದರು.

ಬ್ರೆಕ್ಟ್, ಗ್ರೀಕ್  ನಾಟಕಗಳು ಅತ್ಯುತ್ತಮ ನಾಟಕಗಳಾಗಿ ಹೊರಹೊಮ್ಮಿದ್ದು, ಅದೇ ಮಾರ್ಗದಲ್ಲಿ  ನೀನಾಸo, ರಂಗಯಾಣ ಸಂಸ್ಥೆಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಅಸಂಘಟಿತ, ಸಂಘಟಿತ ನಾಟಕಗಳ ಮುಖಾಂತರ ಮುಖ್ಯ ಮಂತ್ರಿ ಚಂದ್ರು, ಸಿ.ಆರ್.ಸಿಂಹ , ಶಂಕರ್ ನಾಗ್ ಯಶಸ್ವಿ ಆಗಿದ್ದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಎಂ.ಎಲ್.ಎ ಜ್ಯೋತಿ ಗಣೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

 

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *