ಬೆಂಗಳೂರು: ನಿನ್ನೆ (ನ.12 ರಂದು) ತಡರಾತ್ರಿ ಹೃದಯಘಾತದಿಂದ ನಿಧನರಾದ ಖ್ಯಾತ ಪತ್ರಕರ್ತ ರವಿ ಬೆಳಗೆರೆ ಅವ್ರ ಅಂತಿಮ ವಿಧಿ ವಿಧಾನಗಳನ್ನ ಬೆಂಗಳೂರಿನ ಬನಶಂಕರಿ ಚಿತಾಗಾರದಲ್ಲಿ ನೆರವೇರಿದ್ದು, ಪಂಚಭೂತಗಳಲ್ಲಿ ಲೀನಾರಾಗಿದ್ದಾರೆ.
ಹಿಂದೂ ಬ್ರಾಹ್ಮಣ ಸಂಪ್ರಾದಾಯದಂತೆ ರವಿ ಬೆಳಗೆರೆ ಅವರನ್ನು ಅಂತಿಮ ವಿಧಿ ವಿಧಾನ ನೆರವೇರಿಸಲಾಯಿತು. ಚಿತೆಗೆ ಪುತ್ರ ಕರ್ಣ ಮತ್ತು ಹಿಮವಂತ ಅಗ್ನಿ ಸ್ಪರ್ಶ ಮಾಡಿದರು. ಈ ಮೂಲಕ ಬೆಳಗೆರೆಯ ಎಂಬ ಅಕ್ಷರ ಮಾಂತ್ರಿಕನ ಯುಗಾಂತ್ಯವಾಗಿದೆ. ಅಂತಿಮ ವಿಧಿ ವಿಧಾನದಲ್ಲಿ ಕುಟುಂಬ ವರ್ಗದವರು ಸಹಿತ ಅಪಾರ ಅಭಿಮಾನಿಗಳಿಂದ ಅಗಲಿದ್ದಾರೆ.



