ಸಚಿವ ಸ್ಥಾನದ ಕುದುರೆ ಕೊಟ್ಟರೆ ಓಡಿಸುತ್ತೇನೆ; ಇಲ್ಲಂದ್ರೆ ಸಂಸದನಾಗಿ ಮುಂದುವರೆಯುತ್ತೇನೆ:  ಜಿ.ಎಂ. ಸಿದ್ದೇಶ್ವರ  

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
1 Min Read

ಡಿವಿಜಿ ಸುದ್ದಿ, ದಾವಣಗೆರೆ:  ಸಿಎಂ ಯಡಿಯೂರಪ್ಪ ಒಂದು ಮಾತು ಹೇಳ್ತಿದ್ರು, ಕೊಟ್ಟ ಕುದುರೆ ಓಡಿಸದವನು ವೀರನೂ ಅಲ್ಲ, ಧೀರನೂ ಅಲ್ಲ ಅಂತಾ. ಹಾಗೆಯೇ ಕೇಂದ್ರದಲ್ಲಿ ಸಚಿವ ಸ್ಥಾನದ ಸಿಕ್ಕರೆ ಕುದುರೆ ಓಡಿಸುತ್ತೇನೆ. ಸಿಗದಿದ್ದರೆ, ಲೋಕಸಭೆ ಸದಸ್ಯನಾಗಿ ಮುಂದುವರೆಯುತ್ತೇನೆ ಎಂದು ಸಂಸದ ಜಿಎಂ ಸಿದ್ಧೇಶ್ವರ್ ಹೇಳಿದರು.

ಚನ್ನಗಿರಿ ತಾಲ್ಲೂಕಿನ ಶಾಂತಿ ಸಾಗರ ಕೆರೆಗೆ ಬಾಗಿನ ಅರ್ಪಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಯಾವ ಯೋಗನೂ ಇಲ್ಲ. 2004ರಲ್ಲಿ ಚುನಾವಣೆ ಸ್ಪರ್ಧಿಸುವಾಗಲೂ ಬೇಡ ಎಂದಿದ್ದೆ, 2014ರಲ್ಲಿ ಕೇಂದ್ರ  ಸಚಿವ ಸ್ಥಾನವನ್ನೂ ಕೂಡ ಬಯಸಿರಲಿಲ್ಲ. ಹೀಗಾಗಿ ಈಗ ಸಚಿವ ಸ್ಥಾನದ ಕುದುರೆ ಕೊಟ್ಟರೆ ಓಡಿಸುತ್ತೇನೆ. ಸಿಗದಿದ್ದರೆ ಲೋಕಸಭಾ ಸದಸ್ಯನಾಗಿ ಮುಂದುವರೆಯುತ್ತೇನೆ ಎಂದರು.

ಸಜ್ಜನ ರಾಜಕಾರಣಿಯಾಗಿದ್ದ ಕೇಂದ್ರ ಸಚಿವ ಸುರೇಶ್ ಅಂಗಡಿ ಅವರು, ನಿಧನ ಹೊಂದಿದ್ದು ಬಹಳ  ಆಶ್ಚರ್ಯವಾಯಿತು. ಅವರಿಗೆ ಯಾವುದೇ ರೋಗ ಇರಲಿಲ್ಲ. ಕೊರೊನಾ ಯಾವ ರೀತಿ ಬರುತ್ತೇ ಎಂದು ಹೇಳಲಿಕ್ಕೆ ಆಗುವುದಿಲ್ಲ. ಜ್ವರ ಬಂದಿದೆ,  ಅದೇನು ಮಾಡುತ್ತೇ ಬಿಡು ಎಂದು ಕೊರೊನಾ ಬಗ್ಗೆ ಬಹಳ ಉದಾಸೀನ  ಮಾಡಿದ ಅಂಗಡಿ,  ದೆಹಲಿ ಆಸ್ಪತ್ರೆಗೆ ಸೇರಿ 12 ದಿನದಲ್ಲಿ ಸಾವನ್ನಪ್ಪಿದ್ದು ನೋವಿನ ಸಂಗತಿ. ಹೀಗಾಗಿ ಜನಪ್ರತಿನಿಧಿಗಳು ಬಹಳ ಎಚ್ಚರಿಕೆಯಿಂದ ಇರಬೇಕು. ನಾನು ಕೂಡ ಕಲಾಪದ ನಂತರ ದೆಹಲಿ ಕಡೆ ಹೋಗಿಲ್ಲ ಎಂದರು.

 

 

 

 

 

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *