Connect with us

Dvgsuddi Kannada | online news portal | Kannada news online

ವಿಡಿಯೋ: ಸಂಸದ ಜಿ.ಎಂ ಸಿದ್ದೇಶ್ವರ  ರಾಜೀನಾಮೆ ಕೊಡೋಣ ಅಂದಿದ್ಯಾಕೆ..?

ದಾವಣಗೆರೆ

ವಿಡಿಯೋ: ಸಂಸದ ಜಿ.ಎಂ ಸಿದ್ದೇಶ್ವರ  ರಾಜೀನಾಮೆ ಕೊಡೋಣ ಅಂದಿದ್ಯಾಕೆ..?

ಡಿವಿಜಿ ಸುದ್ದಿ.ಕಾಂ, ದಾವಣಗೆರೆ: ನೆರೆ ಪರಿಹಾರ ವಿಚಾರ ರಾಜ್ಯ ಬಿಜೆಪಿ ನಾಯಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.  ಬಿಜೆಪಿ ನಾಯಕರು ಎಲ್ಲೇ ಹೋದರು ನೆರೆ ಪರಿಹಾರ ಯಾವಾಗ ಬರುತ್ತೇ ಅಂತಾ ಮಾಧ್ಯಮಗಳು ಮತ್ತು ಜನರು  ಕೇಳುವಂತಾಗಿದೆ. ಇದಕ್ಕೆ ಬಿಜೆಪಿ ನಾಯಕರು ಒಬ್ಬೊಬರು ಒಂದೊಂದು ಕಾರಣ ಹೇಳಿ ನುಣುಚಿಕೊಳ್ಳುತ್ತಿದ್ದಾರೆ.

ಹೌದು, ಇವತ್ತು ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ ಅವರಿಗೆ ಮಾಧ್ಯಮದವರು ನೆರೆ ಪರಿಹಾರ ವರದಿ ತಿರಸ್ಕರವಾಗಿದೆಯಲ್ಲ ಅಂತಾ  ಪ್ರಶ್ನೆ ಕೇಳಿದ್ದಕ್ಕೆ, ಆ ಬಗ್ಗೆ ನನಗೆ ಏನು ಗೊತ್ತಿಲ್ಲ. ನೀವು ನನ್ನ ಏನು ಕೇಳಬೇಡಿ.  ಪರಿಸ್ಥಿತಿ ಗಂಭೀರವಾದ್ರೆ ಸಂಸದ ಸ್ಥಾನಕ್ಕೆ ರಾಜೀನಾಮೆ ‌ಕೊಡೋಣ ಬಿಡಿ ಅಂದ್ರು.

ಇನ್ನೇರಡು ದಿನಗಳಲ್ಲಿ‌ ಕೇಂದ್ರದಿಂದ ಪರಿಹಾರ ಬರುವ ನಿರೀಕ್ಷೆ ಇದೆ. ನಾವು ಈ ವಿಚಾರವಾಗಿ ಪ್ರಧಾನಿ ಮತ್ತು ಗೃಹ ಸಚಿವರ ಗಮನಕ್ಕೆ ತಂದಿದ್ದೇವೆ. ಪ್ರತಿಪಕ್ಷಗಳ ಈ ವಿಚಾರ ಇಟ್ಟುಕೊಂಡು ಹೋರಾಟ ಮಾಡುತ್ತಿದ್ದಾರೆ. ನಾವು ಪ್ರತಿಪಕ್ಷದಲ್ಲಿದ್ರೆ , ಇದನ್ನೆ ಮಾಡುತ್ತಿದ್ದೇವು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಳ್ತಾರೆ ಅಂತಾ ರಾಜೀನಾಮೆ  ಕೊಡುವುದಕ್ಕೆ  ಆಗುತ್ತಾ. ನಮ್ಮ ಪಕ್ಷ ತೀರ್ಮಾನ ಮಾಡಿದ್ರೆ ರಾಜೀನಾಮೆ ಕೊಡ್ತಿವಿ. ಆದಷ್ಟು ಬೇಗ ಕೇಂದ್ರ ದಿಂದ ಪರಿಹಾರ ಬರುವ ನಿರೀಕ್ಷೆ ಇದೆ. ಪರಿಹಾರ ವಿಚಾರವಾಗಿ ರಾಜ್ಯದ ವರದಿ ತಿರಸ್ಕಾರ ಆಗಿದ್ದರ ಬಗ್ಗೆ ನನಗೆ  ಏನು ಗೊತ್ತಿಲ್ಲ . ನನಗೆ ವಯಸ್ಸಾಗಿದೆ  ಎಂದರು.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top