Connect with us

Dvgsuddi Kannada | online news portal | Kannada news online

ಭತ್ತ ಬೆಳೆಯ ಎಲೆ ಕವಚ ಕೊಳೆ ರೋಗ ನಿರ್ವಹಣೆ ಹೇಗೆ..?

ಕೃಷಿ ಖುಷಿ

ಭತ್ತ ಬೆಳೆಯ ಎಲೆ ಕವಚ ಕೊಳೆ ರೋಗ ನಿರ್ವಹಣೆ ಹೇಗೆ..?

ಡಿವಿಜಿ ಸುದ್ದಿ, ದಾವಣಗೆರೆ:  ಜಿಲ್ಲೆಯಾದ್ಯಂತ ಭತ್ತದ ಬೆಳೆಯು ಬೆಳವಣಿಗೆ ಹಂತದಿಂದ ತೆಂಡೆ ಒಡೆಯುವ ಹಂತದಲ್ಲಿದ್ದು, ಕೆಲ ಪ್ರದೇಶಗಳಲ್ಲಿ ಕವಚ ಕೊಳೆ ರೋಗದ ಬಾಧೆ ಕಾಣಿಸಿಕೊಂಡಿದೆ. ಈ ರೋಗವು ರೈಜೊಕ್ಟೋನಿಯ ಸೋಲನಿ ಎಂಬ ಶಿಲೀಂದ್ರದಿಂದ ಹರಡಲಿದ್ದು, ಮೋಡ ಮುಸುಕಿದ ವಾತಾವರಣದಲ್ಲಿ ಬಾಧೆಯ ತೀವ್ರತೆ ಹೆಚ್ಚಾಗುವ ಸಾಧ್ಯತೆ ಇರುವುದು.

ರೋಗದ ಲಕ್ಷಣಗಳು : ಪ್ರಾರಂಭಿಕ ಹಂತದಲ್ಲಿ ಎಲೆಯ ಕವಚದ ಮೇಲೆ ಕಂದು ಅಂಚುಳ್ಳ ಒಣಗಿದ ಹುಲ್ಲಿನ ಬಣ್ಣದ ಅನಿರ್ಧಿಷ್ಟಾಕಾರದ ಮಚ್ಚೆಗಳು ಕಾಣಿಸಿಕೊಂಡು ಎಲೆಗಳು ಒಣಗುತ್ತವೆ. ನಂತರದ ಹಂತಗಳಲ್ಲಿ ಎಲೆ ಕವಚಗಳು ಹಾಗೂ ಗಿಡದ ಬುಡಗಳು ಕಪ್ಪಾಗಿ ಪೂರ್ತಿಯಾಗಿ ಕೊಳೆತಂತಾಗುತ್ತದೆ.

ನಿರ್ವಹಣಾ ಕ್ರಮಗಳು: ನೀರನ್ನು ಹೆಚ್ಚಾಗಿ ನಿಲ್ಲಿಸುವ ಜಮೀನುಗಳಲ್ಲಿ ಈ ರೋಗದ ಬಾಧೆ ಹೆಚ್ಚಾಗಿ ಕಂಡು ಬರುವುದರಿಂದ ನೀರನ್ನು ಬೆಳೆಗೆ ಕೊಡುವಾಗ ನೀರು ಇಂಗಿದ ಒಂದು ದಿನದ ನಂತರ 2 ಅಂಗುಲದಷ್ಟು ನೀರನ್ನು ನೀಡುವುದು. ಸಾವಯವ ಹಾಗೂ ನೈಸರ್ಗಿಕ ಕೃಷಿ ಅನುಸರಿಸುತ್ತಿರುವ ರೈತರು 10 ಲೀ. ನೀರಿಗೆ 1 ಲೀ. ಹುಳಿ ಮಜ್ಜಿಗೆ ಬೆರೆಸಿ ಸಿಂಪಡಿಸುವುದು.

ರಾಸಾಯನಿಕ ಸಿಂಪರಣೆಗಾಗಿ 1 ಗ್ರಾಂ. ಕಾರ್ಬನ್‍ಡೈಜಿಂ 50 ಡಬ್ಲ್ಯುಪಿ ಅಥವಾ 1ಮಿ.ಲೀ. ಪ್ರೊಪಿಕೋನಜೋಲ್ 25 ಇ.ಸಿ ಅಥವಾ 2 ಮಿ.ಲೀ ಹೆಕ್ಸಾಕೋನಜೋಲ್ 5 ಇ.ಸಿ ಯನ್ನು 1 ಲೀ ನೀರಿನಲ್ಲಿ ಬೆರೆಸಿ ಸಿಂಪಡಿಸುವುದು. ಭತ್ತ ಕಟಾವಾದ ನಂತರ ಭೂಮಿಯನ್ನು ಉಳುಮೆ ಮಾಡಿ ದ್ವಿಧಳ ಧಾನ್ಯಗಳನ್ನು / ಹಸಿರೆಲೆ ಗೊಬ್ಬರಗಳನ್ನು ಬೆಳೆಯುವುದರಿಂದ ಮುಂದಿನ ಬೆಳೆಗೆ ಈ ರೋಗದ ಬಾಧೆ ಕಡಿಮೆಯಾಗುವುದು ಎಂದು ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಕೃಷಿ ಖುಷಿ

To Top