ಡಿವಿಜಿಸುದ್ದಿ.ಕಾಂ, ದಾವಣಗೆರೆ: ಕೆಟ್ಟುದನ್ನು ಕೇಳಬೇಡಿ, ಕೆಟ್ಟುದನ್ನು ನೋಡಬೇಡಿ, ಕೆಟ್ಟಿದನ್ನು ಮಾತನಾಡಬೇಡಿ ಎನ್ನುವ ಗಾಂಧಿಜಿ ಅವರ ತತ್ವನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳು ಪಾಲಿಸಬೇಕಿದೆ ಎಂದು ಸಿದ್ಧಲಿಂಗೇಶ್ವರ ವಿದ್ಯಾ ಸಂಸ್ಥೆಯ ನಿರ್ದೇಶಕಿ ಸುಗ್ಗಲಾ ದೇವಿ ಕರೆ ನೀಡಿದರು.
ಅವರಗೆರೆಯ ಶ್ರೀ ಸಿದ್ದಲಿಂಗೇಶ್ವರ ವಿದ್ಯಾ ಸಂಸ್ಥೆಯ ಶ್ರೀ ಜಿಪಿಜಿಎಂ ಶಾಲೆಯಲ್ಲಿ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಿಸಿ ಮಾತನಾಡಿದರು.

ಮಹಾತ್ಮರಾದ ಗಾಂಧಿಜಿ ಅವರು ಕೆಟ್ಟದನ್ನು ಕೇಳದಿರುವುದು, ನೋಡದಿರುವುದು ಹಾಗೂ ಮಾತನಾಡದಿರುವ ಮಂಗಗಳ ನೀತಿ ಕತೆಯನ್ನು ತಮ್ಮ ಜೀವನದಲ್ಲಿ ಸದಾ ಪಾಲಿಸುತ್ತಿದ್ದರು. ಮಕ್ಕಳು ಕೂಡ ಈ ತತ್ವನ್ನು ಪಾಲಿಸಬೇಕು ಎಂದು ಕರೆ ನೀಡಿದರು.
9ನೇ ತರಗತಿ ವಿದ್ಯಾರ್ಥಿ ಅನುಷಾ ಬಿ ನಿರೂಪಣೆ ನಿರ್ವಹಿಸಿದರು. ಪಲ್ಲವಿ ಸ್ವಾಗತಿಸಿದರು. ಇನ್ನು ವಂದನಾರ್ಪಣೆಯನ್ನು ಜಮುನಾ ಕೆ ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ಎಲ್ಲಾ ಶಿಕ್ಷಕ ವೃಂದದವರು ಭಾಗಿಯಾಗಿದ್ದರು.



