ಡಿವಿಜಿ ಸುದ್ದಿ, ದಾವಣಗೆರೆ: ಈತ ಅಣ್ಣಪ್ಪ ಅಂತಾ. ದಾವಣಗೆರೆ ಬಳಿಯ ಹೊಸಕುಂದವಾಡದ ನಿವಾಸಿ. ಸಂಜೆ ವಾಣಿ ಪತ್ರಿಕೆ ವರದಿಗಾರನಾಗಿದ್ದ, ಕೊರೊನಾ ಸಂಕಷ್ಟದ ಸಮಯದಲ್ಲಿ ಕೆಲಸ ಕಳೆದ ಕೊಂಡವರಲ್ಲಿ ಈತನು ಒಬ್ಬ. ಈ ಸಂಕಷ್ಟದ ನಡುವೆಯೇ ಮತ್ತೊಂದು ಸಂಕಷ್ಟ ಎದುರಾಗಿದೆ.
ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿರುವ ತನ್ನ ಒಂಬತ್ತು ತಿಂಗಳ ಮನಸ್ವಿ ಎಂಬ ಮಗಳನ್ನು ಉಳಿಸಿಕೊಳ್ಳಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಮಗಳಿಗೆ ರೋಗ ನಿರೋಧಕ ಶಕ್ತಿ(COMBINED IMMUNODEFICIENCY) ಇಲ್ಲ. ಹೀಗಾಗಿ ಒಂದು ತಿಂಗಳಿಂದ ಬೆಂಗಳೂರಿನ ನಾರಾಯಣ ಹೃದಯಾಲಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಿತ್ಯ ಹತ್ತು ಸಾವಿರ ರೂಪಾಯಿ ಬರೀ ಔಷಧಿಗೆ ಖರ್ಚಾಗುತ್ತಿದೆ.

ಮಗುವಿಗೆ BONE MORROW TRONSPLANT ಮಾಡಬೇಕು ವೈದ್ಯರು ಸಲಹೆ ನೀಡಿದ್ದಾರೆ. ಇದಕ್ಕೆ 20 ರಿಂದ 25 ಲಕ್ಷ ರೂಪಾಯಿ ವೆಚ್ಚವಾಗಲಿದೆ. ಈಗಾಗಲೇ ಸಂಕಷ್ಟದಲ್ಲಿರುವ ಅಣ್ಣಪ್ಪಗೆ ಈ ಹಣವನ್ನು ಜೋಡಿಸುವುದು ಕಷ್ಟವಾಗಿದೆ. ಮಗಳ ಸ್ಥಿತಿ ಕಂಡು ಕಣ್ಣೀರು ಹಾಕುತ್ತಿದ್ದಾನೆ. ಹೀಗಾಗಿ ಹನಿ ಹನಿ ಕೂಡಿದರೆ ಹಳ್ಳ ಎನ್ನುವಂತೆ ಸಹೃದಯರು ನಿಮ್ಮ ಕೈಲಾದ ಸಹಾಯ ಮಾಡಿದರೆ, ತುಂಬಾ ಸಹಾಯವಾಗಲಿದೆ. ಹೆಚ್ಚಿನ ಅಣ್ಣಪ್ಪ ಹೊಸಕುಂದವಾಡ ಫೋನ್ ನಂಬರ್: 8660625034 ಸಂಪರ್ಕಿಸಿ
ಬ್ಯಾಂಕ್ ಖಾತೆ ಸಂಖ್ಯೆ:




