ಡಿವಿಜಿಸುದ್ದಿ.ಕಾಂ, ದಾವಣಗೆರೆ: ಕಿತ್ತು ಹೋದ ರಸ್ತೆ ರಿಪೇರಿ ಮಾಡುವಂತೆ ಎಷ್ಟು ಬಾರಿ ಮನವಿ ಮಾಡಿದ್ರೂ ತಲೆಗೆ ಹಾಕಿಕೊಳ್ಳದ ಜನಪ್ರತಿನಿಧಿಗಳು, ಅಧಿಕಾರಿಗಳ ವಿರುದ್ಧ ಜಿಲ್ಲೆಯ ಕುಂದವಾಡ ಮನಾ ಬ್ರಿಗೇಡ್ ಯುವಕರು ಮತ್ತು ಗ್ರಾಮಸ್ಥರು ಇವತ್ತು ಅಕ್ಷಶಃ ಸಿಟ್ಟಿಗೆದ್ದಿದ್ದರು. ಹೀಗೆ ಸಿಟ್ಟಿಗೆದ್ದ ಯುವಕರು ವಿನೂತನವಾಗಿ ಪ್ರತಿಭಟನೆ ಮಾಡಿದ್ರು. ಅಷ್ಟಕ್ಕೂ ಆ ಪ್ರತಿಭಟನೆ ಹೇಗಿತ್ತು ಅನ್ನೋದನ್ನು ಹೇಳ್ತಿವಿ ನೋಡಿ…
ಸಂಸದರ ಈಜು ಕೊಳ, ಕಾರ್ಪೋರೇಟರ್ ಈಜುಕೊಳ, ಪಾಲಿಕೆ ಅಧಿಕಾರಿಗಳು ಈಜುಕೊಳ.. ಹೀಗೆ ಒಂದೊಂದು ರಸ್ತೆ ಗುಂಡಿಗೆ ಒಂದು ಬೋರ್ಡ್ ಹಾಕಿ, ಕೆಸರಿನಂತೆ ಇದ್ದ ರಸ್ತೆಯಲ್ಲಿ ಭತ್ತ ನಾಟಿ ಮಾಡಿ ವಿಭಿನ್ನವಾಗಿ ಪ್ರತಿಭಟಿಸಿದ್ರು. ದಾವಣಗೆರೆ ಮಹಾನಗರ ವ್ಯಾಪ್ತಿಗೆ ಒಳಪಡುವ 30ನೇ ವಾರ್ಡ್ನ ಹಳೇ ಕುಂದುವಾಡ ಗ್ರಾಮದ ಗ್ರಾಮಸ್ಥರು ವಿನೂತನ ಪ್ರತಿಭಟಿಸಿ ಎಲ್ಲರ ಗಮನ ಸೆಳೆದಿದ್ದಾರೆ.
ಕೆಸರಿನಿಂದ ಕೂಡಿದ್ದ ರಸ್ತೆಯಲ್ಲಿ ಭತ್ತದ ನಾಟಿ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ ಯುವಕರು. ದೊಡ್ಡ ದೊಡ್ಡ ಗುಂಡಿ ಬಿದ್ದ ಜಾಗದಲ್ಲಿ ಶಾಸಕರ ಈಜು ಕೊಳ, ಸಂಸದರ ಈಜು ಕೊಳ, ಕಾರ್ಪೋರೇಟರ್ ಈಜುಕೊಳ, ಪಾಲಿಕೆ ಅಧಿಕಾರಿಗಳು ಈಜುಕೊಳ ಎಂದು ಬೋರ್ಡ್ ಹಾಕುವುದರ ಮೂಲಕ ಆಕ್ರೋಶ ಹೊರಹಾಕಿದರು.

ಪಾಲಿಕೆ ವ್ಯಾಪ್ತಿಗೆ ಬರುವ ಈ ಗ್ರಾಮಕ್ಕೆ ಹಲವು ವರ್ಷಗಳಿಂದ ಸರಿಯಾದ ರಸ್ತೆಯೇ ಇಲ್ಲ. ಮಳೆ ಬಂತು ಅಂದ್ರೆ ಸಾಕು ಇಲ್ಲಿನ ರಸ್ತೆಗಳು ಕೆಸರುಮಯವಾಗುತ್ತದೆ. ಸಾಕಷ್ಟು ಬಾರಿ ಜನ ಪ್ರತಿನಿಧಿಗಳಿಗೆ ಹಾಗೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ರು ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ವಿನೂತನವಾಗಿ ಪ್ರತಿಭಟನೆ ಮಾಡುವುದರ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ರು..

ಈ ಕೂಡಲೇ ಕಿತ್ತು ಹೋಗಿರುವ ರಸ್ತೆ ಅಭಿವೃದ್ದಿ ಮಾಡದಿದ್ದರೆ ಜನ ಪ್ರತಿನಿಧಿಗಳ ಮತ್ತು ಅಧಿಕಾರಿಗಳ ಮನೆ ಮುಂದೆ ಭತ್ತದ ನಾಟಿ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ರು.. ಮನಾ ಬ್ರಿಗೇಡ್ ಅಧ್ಯಕ್ಷ ಮಧು ಕುಂದುವಾಡ, ರಾಜು ಕರೂರು, ಚಂದ್ರು ಕತ್ತಲಗೆರೆ, ನಾಗರಾಜ್ ಎಸ್ ಬಿ, ಬೀರಣ್ಣ ಬಿಳಿಚೋಡ, ಜಯ್ಯಮ್ಮ, ರಾಜಕುಮಾರ, ಕೋಟಿ, ಪ್ರದೀಪ್, ಸೋಮ,ಅಣ್ಣಪ್ಪ, ಬಸವರಾಜ್, ಚಂದ್ರು, ಗಣೇಶ್, ಮಧುಸೂದನ್ , ಪರಮೇಶ್ , ಸೂರಿ ಸೇರಿದಂತೆ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ರು.



