ಡಿವಿಜಿ ಸುದ್ದಿ, ದಾವಣಗೆರೆ: ಕೊರಚ ಸಮಾಜ ಬಗ್ಗೆ ಹಗುರವಾಗಿ ಮಾತನಾಡಿರುವ ಹೂವಿನಹಡಗಲಿ ಶಾಸಕ ಪಿ.ಟಿ. ಪರಮೇಶ್ವರ್ ನಾಯ್ಕ್ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ವಿಧಾನಸಭಾ ಸ್ಫೀಕರ್ ಅವರಿಗೆ ದೂರು ನೀಡಲಾಗಿದೆ ಎಂದು ಕೊರಚ ಸಮಾಜದ ರಾಜ್ಯಾಧ್ಯಕ್ಷ ಕೆ.ಎನ್. ಓಂಕಾರಪ್ಪ ಹೇಳಿದರು.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಪಿ.ಟಿ.ಪರಮೇಶ್ವರನಾಯ್ಕ್ ನಾಲ್ಕು ದಿನಗಳ ಹಿಂದೆ ತಾಲೂಕಿನ ಕುರುವತ್ತಿ ಗ್ರಾಮದ ಬಳಿಯ ಗುತ್ತೆಮ್ಮನ ಗುಡ್ಡಕ್ಕೆ ಭೇಟಿ ನೀಡಿ ಕಳ್ಳರನ್ನು ನಿಂದಿಸುವ ಭರದಲ್ಲಿ ನಮ್ಮ ಸಮಾಜವನ್ನು ನಿಂದಿಸಿದ್ದಾರೆ. ಕೊರಚ ಸಮಾಜವನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಶಾಸಕರು ತಮ್ಮ ಸ್ಥಾನನದ ಘನತೆ ಮರೆತು ಸಮಾಜವನ್ನು ನಿಂದನೆ ಮಾಡಿದ್ದಾರೆ. ಈ ಬಗ್ಗೆ ಸೂಕ್ತ ದಾಖಲೆಯೊಂದಿಗೆ ಸ್ಪೀಕರ್ ಬಳಿ ದೂರು ದಾಖಲಿಸಿದ್ದೇವೆ ಎಂದರು.
ಒಬ್ಬ ಪರಿಶಿಷ್ಟ ಜಾತಿಯ ವ್ಯಕ್ತಿ. ಮತ್ತೊಬ್ಬ ಪರಿಶಿಷ್ಟ ಜಾತಿ, ಸಮುದಾಯವನ್ನು ನಿಂದಿಸಿರುವುದು ನಾಚೀಗೇಡಿನ ಸಂಗತಿ. ಹೀಗಾಗಿ ಪರಿಶಿಷ್ಟ ಆಯೋಗ ಮತ್ತು ಹೂವಿನಹಡಗಲಿ ಪೊಲೀಸ್ ಠಾಣೆಯಲ್ಲಿ ಶಾಸಕರ ವಿರುದ್ಧ ಈಗಾಗಲೇ ದೂರು ಕೂಡ ದಾಖಲಾಗಿದೆ. ಕೊರಚ ಸಮುದಾಯ ಕಷ್ಟಪಟ್ಟು ದುಡಿಯುತ್ತಿದ್ದು ಶಿಕ್ಷಣ, ಆರ್ಥಿಕತೆ ಹಾಗೂ ರಾಜಕೀಯದಲ್ಲಿ ಈಗಷ್ಟೇ ಗುರುತಿಸಿಕೊಳ್ಳುತ್ತಿದ್ದೇವೆ. ಇಂತಹ ಸಮಯದಲ್ಲಿ ಶಾಸಕರ ಕೀಳು ಮಟ್ಟದ ಕೇಳಿಕೆ ನೋವು ಉಂಟು ಮಾಡಿದೆ. ಈ ಬಗ್ಗೆ ಹೋರಾಟ ರೂಪಿಸಲು ಬಳ್ಳಾರಿ ಮತ್ತು ದಾವಣಗೆರೆ ಜಿಲ್ಲಾಧಿಕರಿಗಳಿಗೆ ಮನವಿ ಸಲ್ಲಿಸಿದ ನಂತರ ನಿರ್ಧರಿಸುತ್ತೇವೆ ಎಂದದರು.
ಕೊರೊಚ ಸಮುದಾಯದ ತಾಲ್ಲೂಕು ಅಧ್ಯಕ್ಷ ಅಶೋಕ್ ಮಾತನಾಡಿ, ಕುರಿಗಳ ಕಳ್ಳತನ ಮಾಡುವವರು ಕೊರಚ ಸಮಾಜದವರಲ್ಲ. ಅವರು ಆರೋಪ ಮಾಡಿರುವ ಕಳ್ಳತನದಲ್ಲಿ ಸ್ವಜಾತಿಯವರ ಕೈವಾಡವಿದೆ. ಅವರ ರಕ್ಷಣೆಗಾಗಿ ಕೊರೊಚ ಸಮುದಾಯದ ಮೇಲೆ ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ತಾ.ಪಂ ಮಾಜಿ ಸದಸ್ಯ ಎಂ . ಮಲ್ಲೇಶ್, ಸುರೇಶ್, ಕೃಷ್ಣ, ಪುರುಷೋತ್ತಮ, ಅಂಬರೇಶ್ ಇದ್ದರು.



