ಡಿವಿಜಿ ಸುದ್ದಿ, ಬೆಂಗಳೂರು: ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಲು ಏನು ಬೇಕೋ ಅದನ್ನು ಮಾಡುತ್ತಿದ್ದಾರೆ. ತಮ್ಮನ ಮೂಲಕ ನನ್ನನ್ನು ಮುಗಿಸಲು ರಾಜಕೀಯ ಮಾಡುತ್ತಿದ್ದಾರೆ ಎಂಬುದು ತಿಳಿದಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಡಿಕೆಶಿ ವಿರುದ್ಧ ಹರಿಹಾಯ್ದಿದ್ದಾರೆ.
ಸಿ.ಪಿ.ಯೋಗೆಶ್ವರ್ ಅವರ ಹೇಳಿಕೆ ಕುರಿತು ಮಾತನಾಡಿದ ಅವರು, ಮಂಡ್ಯ ಚುನಾವಣೆಯಲ್ಲಿ ಜೋಡೆತ್ತು ಎಂದು ಭಾಷಣ ಮಾಡಿದ್ದು ಬೇರೆ. ಮಂಡ್ಯದಲ್ಲಿ ಜೆಡಿಎಸ್ಗೆ ಕಾಂಗ್ರೆಸ್ನ ಯಾವುದೇ ನಾಯಕರು ಬೆಂಬಲ ನೀಡಲಿಲ್ಲ. ಮಂಡ್ಯದಲ್ಲೂ ಬಿಜೆಪಿ, ಕಾಂಗ್ರೆಸ್, ರೈತ ಸಂಘ ಸೇರಿಯೇ ನನ್ನನ್ನು ಮುಗಿಸಲು ಯತ್ನಿಸಿದರು. ಅಲ್ಲದೆ ತುಮಕೂರಿನಲ್ಲಿಸಹ ಕಾಂಗ್ರೆಸ್- ಬಿಜೆಪಿ ಸೇರಿಯೇ ದೇವೇಗೌಡರನ್ನು ಸೋಲಿಸಿದರು. ಮೈತ್ರಿ ಮಾಡಿಕೊಳ್ಳುತ್ತೇವೆ ಎಂದು ನಾವು ಹೋಗಿರಲಿಲ್ಲ. ಇದೆಲ್ಲ ಆಗಿದ್ದು ಕಾಂಗ್ರೆಸ್ ಹೈ ಕಮಾಂಡ್ನಿಂದ ಎಂದು ಆರೋಪಿಸಿದ್ದಾರೆ.

ನೇರವಾಗಿ ಸರ್ಕಾರ ತೆಗೆದಿದ್ದು ಬಿಜೆಪಿಯಾದರೂ ಸರ್ಕಾರದಲ್ಲಿ ಇದಕ್ಕೆ ಆರಂಭದಿಂದಲೂ ಪ್ರೇರೇಪಣೆ ನೀಡಿದ್ದು ಕಾಂಗ್ರೆಸ್ನವರು. ಹೀಗಾಗಿ ಇಬ್ಬರೂ ನನಗೆ ಶತ್ರುಗಳೇ, ಇಬ್ಬರ ವಿರುದ್ಧವೂ ನಾನು ಹೋರಾಟ ಮಾಡಬೇಕಿದೆ.ಮೆಂಟ್ ರಾಜಕೀಯ ಮಾಡುತ್ತಿಲ್ಲ. ಇದರಿಂದ ನನಗೆನೂ ಆಗಬೇಕಾಗೂ ಇಲ್ಲ ಸ್ಪಷ್ಟಪಡಿಸಿದ್ದಾರೆ.
ಬೆಳಗಾವಿ ರಾಜಕಾರಣದಿಂದಲೇ ಸರ್ಕಾರ ಉರುಳಿತು. ಇದಕ್ಕೇ ಕಾರಣವೇ ಡಿ.ಕೆ.ಶಿವಕುಮಾರ್ ಎಂದು ಎಚ್ಡಿಕೆ ಹರಿಹಾಯ್ದಿದ್ದಾರೆ. ಈಗ ನನಗೆ ಯಾರೂ ಮಿತ್ರರಿಲ್ಲ ಎಂದು ಹೇಳುವ ಮೂಲಕ ಡಿಕೆಶಿ ವಿರುದ್ಧ ಹರಿಹಾಯ್ದಿದ್ದಾರೆ.
ನಮ್ಮ ಪಕ್ಷದ ಕಾರ್ಯಕರ್ತರನ್ನು ಡಿಕೆಶಿ ಸೆಳೆಯುತ್ತಿದ್ದಾರೆ. ಅಲ್ಲದೆ ವ್ಯವಸ್ಥಿತವಾಗಿ ಅಪಪ್ರಚಾರ ಮಾಡಲಾಗುತ್ತಿದೆ. ರಾಮನಗರದ ಜನತೆಗೂ ನನಗೂ ಇರುವ ಬಾಂಧವ್ಯವನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ. ಎಲ್ಲರಿಗೂ ನಾನೇ ಟಾರ್ಗೆಟ್. ಜೆಡಿಎಸ್ ಪಕ್ಷ ಮುಗಿಸಿದರೆ ಎರಡು ರಾಷ್ಟ್ರೀಯ ಪಕ್ಷಗಳು ಮಾತ್ರ ಉಳಿಯುತ್ತವೆ. ಹೀಗಾಗಿ ಜೆಡಿಎಸ್ ಮುಗಿಸಲು ನೋಡುತ್ತಿದ್ದಾರೆ. ಡಿಕೆಶಿ ಟ್ರಬಲ್ ಶೂಟರ್ ಎಂದು ಪ್ರಚಾರ ಪಡೆದರು, ಯಾವ ರೀತಿಯ ಟ್ರಬಲ್ ಶೂಟರ್ ಎಂಬುದು ಗೊತ್ತಿದೆ ಎಂದರು.



