ಕೂಡ್ಲಗಿ: ಕೋಡಿಬಿದ್ದ ರಾಮದುರ್ಗ ಕೆರೆ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
1 Min Read

ಡಿವಿಜಿ ಸುದ್ದಿ, ಬಳ್ಳಾರಿ: ಜಿಲ್ಲೆಯ  ಕೂಡ್ಲಗಿ ತಾಲೂಕಿನ ಬಹುದೊಡ್ಡ ಕೆರೆಗಳಲ್ಲೊಂದಾದ ರಾಮದುರ್ಗ ಕೆರೆ,  ಸತತ  ಮಳೆಯಿಂದಾಗಿ ಸಂಪೂರ್ಣ ತುಂಬಿ ನೀರು ಕೋಡಿ ಮೇಲಿಂದ ಹರಿದು ಹೊರ ಬಿದ್ದಿದೆ.

ಇದರಿಂದ ರಾಮದುರ್ಗ ಮಾತ್ರವಲ್ಲದೆ ಸುತ್ತಲಿನ ರೈತರಲ್ಲಿ ಅತೀವ ಹಷ೯ವನ್ನುಂಟುಮಾಡಿದೆ. ರೈತರಿಗೆ ಮಾತ್ರವಲ್ಲ ದನಕರು, ಪಶು ಪಕ್ಷಿಗಳಿಗೂ, ಇಡೀ ಪ್ರಕೃತಿಯಲ್ಲಿಯೇ ಖುಷಿ ಮೂಡಿಸಿದೆ. ಶನಿವಾರದಂದು ಒತ್ತಾರೆದ್ದು ಕೆರೆಯ ಕೋಡಿಯ ಮೇಲೆ ನೀರುಹರಿಯುವ ಮನಮೋಹಕ ದ್ರುಶ್ಯವನ್ನು, ಕಣ್ಣುತುಂಬಿಸಿಕೊಳ್ಳಲು ಗ್ರಾಮಸ್ಥರು ಕೆರೆಯತ್ತ ಲಗ್ಗೆ ಹಾಕಿದ್ದರು.

rayadurga 2

ತಾಲೂಕಿನ ಗುಡೇಕೋಟೆ ಕೆರೆ ಹಾಗೂ ಪ್ರಮುಖ ಕೆರೆಗಳು ನೀರುತುಂಬಿ ತುಳುಕುತ್ತಿವೆ. ಈ ಸನ್ನಿವೇಶಗಳನ್ನು ಗುಡೇಕೋಟೆ ಪೊಲೀಸ್ ಠಾಣೆಯ ಪೇದೆಗಳಾದ ಮಹಾಬಲೇಶ್ವರಪ್ಪ, ಚಿದಾನಂದಪ್ಪ ಹಾಗೂ ಅಂಜಿನಪ್ಪನವರು ಸೆರೆಹಿಡಿದಿದ್ದಾರೆ. ತಾಲೂಕಿನ ಪ್ರಮುಖ ಕೆರೆಗಳ ಪಟ್ಟಿಯಲ್ಲಿರುವ ರಾಮದುರ್ಗ ಕೆರೆ ಕೋಡಿ ಬಿದ್ದಿದ್ದು, ಇದು ತಾಲೂಕಿನ ಕ್ಷೇಮದ ಸಂಖೇತವೆಂದೇ ಭಾವಿಸಲಾಗುತ್ತದೆ. ಆದುದರಿಂದಾಗಿ ಗ್ರಾಮ ಹಾಗೂ ತಾಲೂಕಿನ ರೈತರಲ್ಲಿ ಮಂದಹಾಸ ಮೂಡಿಸಿದೆ. ತಾಲೂಕಿನ ರೈತರಿಗೆ ಪ್ರಸಕ್ತ ವಷ೯ವು ಮಳೆರಾಯನ ಕೃಪಾಶೀವಾ೯ದ ಲಭ್ಯವಾಗಿದೆ.

 

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *