Connect with us

Dvgsuddi Kannada | online news portal | Kannada news online

ಚಿರು ನನ್ನ ತಮ್ಮನಿದ್ದಂತೆ, ಅವನ ಬಗ್ಗೆ ಮಾತನಾಡುವುದು ಬೇಡ: ಸುದೀಪ್

ಸಿನಿಮಾ

ಚಿರು ನನ್ನ ತಮ್ಮನಿದ್ದಂತೆ, ಅವನ ಬಗ್ಗೆ ಮಾತನಾಡುವುದು ಬೇಡ: ಸುದೀಪ್

ಡಿವಿಜಿ ಸುದ್ದಿ, ತುಮಕೂರು: ಚಿರು ನನ್ನ ತಮ್ಮನಂತೆ ಇದ್ದ.  ನನಗೆ ಬಹಳ ಬೇಕಾದ ಹುಡುಗ. ಅವನು ಕೂಡ ತಮ್ಮನ ರೀತಿಯೇ ನಡೆದುಕೊಳ್ಳುತ್ತಿದ್ದನು. ಈಗ ಅವನ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಸುದೀಪ್ ಹೇಳಿದರು.

ಸಿದ್ಧಗಂಗಾ ಮಠಕ್ಕೆ ಇಂದ್ರಜಿತ್ ಲಂಕೇಶ್ ಅವರ ಜೊತೆ ಭೇಟಿ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸುದೀಪ್, ಚಿರು ಬಗ್ಗೆ  ಮತ್ತೆ ಕೆದಕಿ  ಮಾತನಾಡುವುದು ಬೇಡ. ಅಷ್ಟೇ ಅಲ್ಲದೇ ಅವರಿಗೂ ಒಂದು ಕುಟುಂಬದ ಇದೆ. ಸುಂದರವಾದ ತಮ್ಮ ಇದ್ದಾನೆ. ಅಣ್ಣನ ಅಗಲಿಕೆಯಿಂದ ಇನ್ನೂ ಚೇತರಿಸಿಕೊಂಡಿಲ್ಲ. ಹೆಂಡತಿ ಇದ್ದಾರೆ, ಹೀಗಾಗಿ ಅವನ ಬಗ್ಗೆ ಮಾತನಾಡುವುದು ಬೇಡ ಎಂದರು.

sudeep tumakuru 3

ಬೇರೆಯವರಿಗೆ ಸಲಹೆ ಕೊಡಲು ನಾವು ಯಾರು? ಜೀವನದಲ್ಲಿ ಯಾರಿಗೂ ಸಲಹೆ ಕೊಡಬಾರದು. ಯಾಕೆಂದರೆ ಕಲಿಯೋರು ಕಲಿಯುತ್ತಾರೆ. ಬದುಕು ಅನುಭವ ಕಲಿಸುತ್ತದೆ ಎಂದರು.

ನಾನು ಹುಟ್ಟುಹಬ್ಬ ಆಚರಿಸುವುದನ್ನು ನಿಲ್ಲಿಸಿ ತುಂಬಾ ವರ್ಷಗಳಾಗಿವೆ. ನನ್ನ ಸ್ನೇಹಿತರೆ ನನ್ನ ಹುಟ್ಟುಹಬ್ಬವನ್ನು ಆಚರಿಸುತ್ತಾರೆ. ಆದರೆ ಈ ವರ್ಷ ನಮ್ಮ ಪೋಷಕರೊಂದಿಗೆ ಸಮಯ ಕಳೆದಿದ್ದೇನೆ. ಇದರಿಂದ ನನಗೆ ಖುಷಿಯಾಗಿದೆ. ಜೊತೆಗೆ ಯಾರನ್ನೂ ಭೇಟಿ ಆಗದಿರುವುದಕ್ಕೆ ನೋವಿದೆ ಎಂದರು.

ಇಂದ್ರಜಿತ್ ಅವರು ನನಗೆ ತುಂಬಾ ವರ್ಷಗಳಿಂದ ಗೊತ್ತು. ಆದರೆ ಅವರ ಜೀವನದಲ್ಲಿ ಏನು ನಡೆಯುತ್ತಿದೆ ಎಂಬ ಕುತೂಹಲ ನನಗಿಲ್ಲ ಎಂದು ತಿಳಿಸಿದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಸಿನಿಮಾ

ದಾವಣಗೆರೆ

Advertisement
Advertisement Enter ad code here

Title

To Top